ಹೊಸನಗರ

ಅಮ್ಮನಘಟ್ಟ ಜಾತ್ರೆ ಮಂಡಕ್ಕಿ ವ್ಯಾಪಾರಕ್ಕೆ ಹೋದಾಗ ಮನೆಗೆ ನುಗ್ಗಿ ನಗ-ನಾಣ್ಯ ದೋಚಿದ ಕಳ್ಳರು !

HOSANAGARA ; ತಾಲ್ಲೂಕಿನ ವರಕೋಡು ಗ್ರಾಮದಲ್ಲಿ ಮನೆಗೆ ನುಗ್ಗಿ ಸುಮಾರು 56 ಸಾವಿರ ರೂ. ಬೆಲೆ ಬಾಳುವ ಚಿನ್ನಾಭರಣ ಹಾಗೂ 20 ಸಾವಿರ ನಗದನ್ನು ಕಳ್ಳರು ದೋಚಿರುವ ಘಟನೆ ನಡೆದಿದೆ.

inshot_20241009_1640083442234281777858277252.jpg

ಹಾಡಹಗಲೇ ಹನುಮಂತ ಕಾಮತ್‌ರವರ ಮನೆಯ ಹಿಂಬಾಗಿಲಿನ ಲಾಕ್ ಮುರಿದು ಕಳ್ಳತನ ಮಾಡಿದ್ದಾರೆ‌.

inshot_20241009_1640374183380412776137052005.jpg

ಮಂಗಳವಾರ ಬೆಳಗ್ಗೆ ಹನುಮಂತ ಕಾಮತ್‌ರವರು ಪತ್ನಿ ಸಹಿತವಾಗಿ ಅಮ್ಮನಘಟ್ಟ ಜಾತ್ರೆಗೆ ಮಂಡಕ್ಕಿ ವ್ಯಾಪಾರಕ್ಕೆ ಹೋಗಿದ್ದು ಸುಮಾರು ಸಂಜೆ 4 ಗಂಟೆಯ ಸಂದರ್ಭದಲ್ಲಿ ಮನೆಗೆ ಬಂದು ನೋಡಿದಾಗ ಮನೆಯ ಹಿಂಬಾಗಿಲಿನ ಲಾಕ್ ಮುರಿದು ದೇವರ ಕೊಣೆಯಲ್ಲಿದ್ದ ಗಾಡ್ರೇಜ್ ಬೀಗ ಮುರಿದು 4 ಗ್ರಾಂನ ಒಂದು ಮತ್ತು 2 ಗ್ರಾಂನ ಎರಡು ಚಿನ್ನದ ಉಂಗುರ ಒಟ್ಟು ಸುಮಾರು 56,000 ಬೆಲೆ ಬಾಳುವ ಬಂಗಾರ ಹಾಗೂ ವ್ಯಾಪಾರ ಮಾಡಿ ಇಟ್ಟಿದ್ದ 20 ಸಾವಿರ ಹಣ ದೋಚಿ ಪರಾರಿಯಾಗಿದ್ದಾರೆಂದು ಹನುಮಂತ ಕಾಮತ್‌ರವರು ದೂರು ನೀಡಿದ್ದಾರೆ.

inshot_20241009_1640574881038239055814556515.jpg

ಪೊಲೀಸ್ ತನಿಖೆ ಚುರುಕು :

ಹೊಸನಗರದ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ರವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್‌ಪೆಕ್ಟರ್ ಶಂಕರಗೌಡ ಪಾಟೇಲ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ರಂಜಿತ್‌ಕುಮಾರ್, ಸುನೀಲ್, ಮಹೇಶ್ ಸಂದೀಪ, ಜಗದೀಶ್ ಹಾಗೂ ಇತ್ತಿತರ ಸಿಬ್ಬಂದಿಗಳು ಸ್ಥಳ ಮಹಜರು ನಡೆಸಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ‌.

inshot_20241009_1641319194719161945211689689.jpg

Leave a Comment