ತೀರ್ಥಹಳ್ಳಿ ವಕೀಲರ ಮೇಲೆ ಹಲ್ಲೆ ; ಹೊಸನಗರದಲ್ಲಿ ಕಲಾಪ ಬಹಿಷ್ಕಾರ

Written by Mahesh Hindlemane

Published on:

ಹೊಸನಗರ ; ತೀರ್ಥಹಳ್ಳಿಯ ವಕೀಲರ ಸಂಘದ ಸದಸ್ಯರಾದ ಮಧುಕರ್ ಮಯ್ಯರವರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು ಹಲ್ಲೆಯನ್ನು ಖಂಡಿಸಿ ಹೊಸನಗರ ಬಾರ್ ಅಸೋಸಿಯೇಷನ್ ವತಿಯಿಂದ ಬಾರ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ಚಂದ್ರಪ್ಪನವರ ನೇತೃತ್ವದಲ್ಲಿ ಒಂದು ದಿನ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಈ ಕೃತ್ಯದಲ್ಲಿ ತೊಡಗಿರುವ ಎಲ್ಲಾ ಆರೋಪಿಗಳನ್ನು ಕೂಡಲೆ ಬಂಧಿಸಬೇಕೆಂದು ಆಗ್ರಹಿಸಿದರು.

WhatsApp Group Join Now
Telegram Group Join Now
Instagram Group Join Now

ಈ ಸಂದರ್ಭದಲ್ಲಿ ವಕೀಲರ ಸಂಘದ ಸದಸ್ಯರಾದ ಷಣ್ಮುಖಪ್ಪ, ಮಂಡಾನಿ ಗುರುಮೂರ್ತಿ, ಪ್ರಶಾಂತ್, ಉಮೇಶ್, ವಾಲೆಮನೆ ಶಿವಕುಮಾರ್, ಈರಪ್ಪ, ಮಹೇಶ್ ಎಂ.ವೈ, ಗಗ್ಗ ಬಸವರಾಜ್, ಕರ್ಣಕುಮಾರ್, ಮೋಹನ್ ಶೆಟ್ಟಿ, ಮಹಾದೇವಪ್ಪ, ರಾಮಚಂದ್ರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment