ತೀರ್ಥಹಳ್ಳಿ: ಪಟ್ಟಣದ ಶ್ರೀ ರಾಮೇಶ್ವರ ದೇವಾಲಯದ ಸಮೀಪದಲ್ಲಿ ಮಘೆ ಮಳೆಯ ಆರ್ಭಟಕ್ಕೆ ಉಕ್ಕಿ ಹರಿಯುತ್ತಿರುವ ತುಂಗಾನದಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಬಾಗಿನ ಅರ್ಪಿಸಿದರು.
ಮಲೆನಾಡಿನ ಜೀವ ನದಿ ತುಂಗೆ ಈ ಬಾರಿ ಎರಡು ಬಾರಿ ಉಕ್ಕಿ ಹರಿದು ಶ್ರೀ ರಾಮ ಮಂಟಪ ಮುಳುಗುವಂತಾಗಿದೆ.ಕ್ಷೇತ್ರದ ಜನರ ಬದುಕು ಹಸನಾಗಲು ತುಂಗೆ ಸದಾ ಕಾಲ ಕಾಪಾಡಲಿ ಎಂದು ಶಾಸಕರು ಮಾತನಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರಂಜಿತ್, ಎಂಐಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ,ಪ.ಪಂ.ಅಧ್ಯಕ್ಷ ರಹಮತ್ ಅಜಾದಿ,ಪ.ಪಂ.ಉಪಾಧ್ಯಕ್ಷೆ ಗೀತಾರಮೇಶ್,ಪ.ಪಂ.ಸದಸ್ಯರು,ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ಶೈಲಾ ಮುಂತಾದವರಿದ್ದರು.