ಹೊಸನಗರ ಗಣಪತಿ ಕೆರೆಗೆ ತಡೆಗೋಡೆ ನಿರ್ಮಿಸಲು ಡಿಸಿಗೆ ಮನವಿ

0 220

ಹೊಸನಗರ: ಪಟ್ಟಣದ ಶಿವಪ್ಪನಾಯಕ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನ ಹಿಂಬದಿಯ ಕೆರೆಯ ತಡೆಗೋಡೆ ಹಾಗೂ ಕೋಡಿ ಕಾಮಗಾರಿ ಕಳಪೆಯಾಗಿದೆ ಎಂದು ಸರ್ವಧರ್ಮ ಸೌಹಾರ್ದ ಸಂಸ್ಥೆಯ ಅಧ್ಯಕ್ಷ ಜಯರಾಮ್ ಶೆಟ್ಟಿಯವರು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರಿಗೆ ಮನವಿ ಸಲ್ಲಿಸಿ ತುರ್ತು ಕಾಮಗಾರಿ ನಡೆಸಿಕೊಡಬೇಕೆಂದು ಮನವಿ ಪತ್ರ ನೀಡುವ ಮೂಲಕ ಕೇಳಿಕೊಂಡಿದ್ದಾರೆ.

ಅವರು ತಮ್ಮ ಮನವಿ ಪತ್ರದಲ್ಲಿ ಸಾರ್ವಜನಿಕರು ಕೆರೆಯ ದುರಸ್ಥಿಯ ಬಗ್ಗೆ ನಮ್ಮ ಸಂಸ್ಥಗೆ ಮನವಿ ಸಲ್ಲಿಸಿದ್ದು ಎರಡು ವರ್ಷಗಳ ಹಿಂದೆ ನಿರ್ಮಿಸಿರುವ ಗಣಪತಿ ಕೆರೆಯ ಕಾಮಗಾರಿ ಕಳಪೆ ಮಟ್ಟದಿಂದ ಮಾಡಲಾಗಿದೆ ಕೋಡಿಯು ಕಳಪೆಯಾಗಿದೆ. ಈ ವರ್ಷದ ಮಳೆಗಾಲದಲ್ಲಿ ತಡೆಗೋಡೆ ಸಂಪೂರ್ಣ ಬಿದ್ದು ಹೋಗಲಿದೆ ಇದರಿಂದ ಸಾರ್ವಜನಿಕರಿಗೆ ಹಾಗೂ ದನ-ಕರುಗಳಿಗೆ ಕಷ್ಟಕರವಾಗಲಿದೆ. ತಾವು ಹೊಸನಗರಕ್ಕೆ ಆಗಮಿಸಿ ಕಾಮಗಾರಿಯನ್ನು ವೀಕ್ಷಿಸಿ ಕೆರೆಯ ದುರಸ್ಥಿಗೆ ಅನುಮೋದನೆ ಮಾಡಿಕೊಡಬೇಕು ಎಂದು ತಿಳಿಸಿದ್ದು ಜಿಲ್ಲಾಧಿಕಾರಿಗಳು ಹೊಸನಗರಕ್ಕೆ ಆಗಮಿಸಿ ಕೆರೆಯನ್ನು ವೀಕ್ಷಿಸಿ ಅನುಮೋದನೆ ನೀಡುವುದಾಗಿ ತಿಳಿಸಿದ್ದಾರೆ ಎಂದು ಜಯರಾಮ್ ಶೆಟ್ಟಿಯವರು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!