ಅಮೃತ ಶ್ರೀ ಬಳ್ಳೇಶ್ವರ ದೇವಸ್ಥಾನ ಅರ್ಚಕ ಹುದ್ದೆಗೆ ಅರ್ಜಿ ಆಹ್ವಾನ

Written by Koushik G K

Published on:

ಹೊಸನಗರ : ಹುಂಚ ಹೋಬಳಿಯ ಅಮೃತ ಗ್ರಾಮದ ಪ್ರಸಿದ್ಧ ಶ್ರೀ ಬಳ್ಳೇಶ್ವರ ದೇವಸ್ಥಾನದಲ್ಲಿ ಅರ್ಚಕರ ಹುದ್ದೆ ಖಾಲಿಯಿದ್ದು, ಅದಕ್ಕಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಜುಲೈ 13ರ ಒಳಗೆ ಅರ್ಜಿ ಆಹ್ವಾನಿಸಲಾಗಿದೆ.

WhatsApp Group Join Now
Telegram Group Join Now
Instagram Group Join Now

ಈ ಕುರಿತು ಮಾಹಿತಿ ನೀಡಿದ ಹೊಸನಗರ ತಹಸೀಲ್ದಾರ್ ರಶ್ಮಿ ಹಾಲೇಶ್, “ದೇವಾಲಯವು ಮುಜಾರಾಯಿ ಇಲಾಖೆಗೆ ಸೇರಿದ್ದು, ಪ್ರವರ್ಗ ಸಿ ದೇವಸ್ಥಾನವಾಗಿದೆ. ಅರ್ಚಕರ ಹುದ್ದೆ ಖಾಲಿಯಿರುವ ಹಿನ್ನೆಲೆಯಲ್ಲಿ ಈ ಹುದ್ದೆ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗುತ್ತಿದೆ,” ಎಂದು ತಿಳಿಸಿದರು.

ಅರ್ಜಿ ಸಲ್ಲಿಸಲು ಆಸಕ್ತರು ತಮ್ಮ ದಾಖಲೆಗಳೊಂದಿಗೆ ತಾಲ್ಲೂಕು ಕಚೇರಿಗೆ (ಹೊಸನಗರ) ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಜುಲೈ 13, 2025 ಕೊನೆಯ ದಿನಾಂಕವಾಗಿದೆ .

Leave a Comment