ತೀರ್ಥಹಳ್ಳಿಯ ಸಹ್ಯಾದ್ರಿ ಸಂಸ್ಥೆಗೆ ಈ ಸಾಲಿನಲ್ಲಿ ರೂ.11 ಕೋಟಿಗೂ ಹೆಚ್ಚು ಲಾಭ: ಬಸವಾನಿ ವಿಜಯದೇವ್

Written by Koushik G K

Published on:

ತೀರ್ಥಹಳ್ಳಿ– ಮಲೆನಾಡಿನ ಪ್ರತಿಷ್ಠಿತ ಸಹ್ಯಾದ್ರಿ ಸಂಸ್ಥೆ 2024-25ನೇ ಸಾಲಿನಲ್ಲಿ ನಿರೀಕ್ಷೆಗೂ ಮೀರಿ ರೂ.11 ಕೋಟಿ 64 ಲಕ್ಷ 11 ಸಾವಿರ 745 ಲಾಭ ಗಳಿಸಿದೆ ಎಂದು ಸಂಸ್ಥೆಯ ಮುಖ್ಯಸ್ಥ ಬಸವಾನಿ ವಿಜಯದೇವ್ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಪಟ್ಟಣದ ಸಹ್ಯಾದ್ರಿ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಂಸ್ಥೆಯು ನಿರಂತರವಾಗಿ ಎ ಶ್ರೇಣಿ ಆಡಿಟ್ ವರದಿ ಪಡೆಯುತ್ತಾ ಬಂದಿದ್ದು, ಈ ಸಾಲಿನಲ್ಲಿ ಒಟ್ಟು ವ್ಯವಹಾರ ರೂ.1,475 ಕೋಟಿಗೂ ಹೆಚ್ಚು ತಲುಪಿದೆ ಎಂದರು.

ಸಾಲ-ಠೇವಣಿ ಹಾಗೂ ವಸೂಲಾತಿ ಪ್ರಗತಿ

ಸಂಸ್ಥೆಯು ಸುಮಾರು ರೂ.104 ಕೋಟಿ 54 ಲಕ್ಷ ಠೇವಣಿ ಹೊಂದಿದ್ದು, ರೂ.140 ಕೋಟಿಗೂ ಅಧಿಕ ಸಾಲ ವಿತರಣೆಯಾಗಿದೆ. ಸಾಲ ವಸೂಲಾತಿ ಶೇ.77% ಪ್ರಗತಿಯನ್ನು ದಾಖಲಿಸಿದೆ ಎಂದು ಅವರು ವಿವರಿಸಿದರು.

ವಿಭಾಗವಾರು ಲಾಭದ ವಿವರ

  • ಅಡಿಕೆ ವ್ಯಾಪಾರ: ರೂ.7.89 ಕೋಟಿ
  • ಚೀಟಿ ನಿಧಿ ವಿಭಾಗ: ರೂ.3 ಕೋಟಿ ಹೆಚ್ಚು
  • ಸಹ್ಯಾದ್ರಿ ಫ್ಯೂಯಲ್ಸ್: ರೂ.40 ಲಕ್ಷ ಹೆಚ್ಚು
  • ನಂದಿನಿ ಮಿಲ್ಕ್ ಪಾರ್ಲರ್ ಮತ್ತು ಎಮಿಷನ್ ಟೆಸ್ಟ್: ರೂ.6.30 ಲಕ್ಷ
  • ಸರ್ವೋ ಇಂಡಿಯನ್ ಆಯಿಲ್: ರೂ.7.70 ಲಕ್ಷ
  • ಸಹ್ಯಾದ್ರಿ ವಾಟರ್ ಪ್ಲಾಂಟ್: ರೂ.8.29 ಲಕ್ಷ

ಇದರ ಜೊತೆಗೆ, ಸಹಕಾರಿದನಿ ವಾರಪತ್ರಿಕೆ ಮತ್ತು ಸಹ್ಯಾದ್ರಿ ಬಸ್ ಸೇವೆ ಮಲೆನಾಡಿನಲ್ಲಿ ಉತ್ತಮ ಖ್ಯಾತಿ ಗಳಿಸಿರುವುದಾಗಿ ಅವರು ಹೇಳಿದರು.

ಸದಸ್ಯರಿಗೆ ಡಿವಿಡೆಂಡ್ ಘೋಷಣೆ

ಈ ಸಾಲಿನಲ್ಲಿಯೂ ಸದಸ್ಯರಿಗೆ ಶೇ.10% ಡಿವಿಡೆಂಡ್ ನೀಡಲು ಸಂಸ್ಥೆ ನಿರ್ಧರಿಸಿದೆ ಎಂದು ಬಸವಾನಿ ವಿಜಯದೇವ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಚಂದ್ರಕಲಾ ಉಪಸ್ಥಿತರಿದ್ದರು.

Leave a Comment