ವಿಜಯದಶಮಿ ಅಂಗವಾಗಿ ಅಮ್ಮನಘಟ್ಟದಲ್ಲಿ ಚಂಡಿಕಾ ಹೋಮ

Written by Mahesha Hindlemane

Published on:

ಹೊಸನಗರ ; ತಾಲೂಕಿನ ಇತಿಹಾಸ ಪ್ರಸಿದ್ಧ ಕೋಡೂರು ಸಮೀಪದ ‌ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ಕ್ಷೇತ್ರದಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ಶರನ್ನವರಾತ್ರಿ ಹಿನ್ನಲೆಯಲ್ಲಿ ವಿಜಯದಶಮಿ ದಿನದಂದು ಏರ್ಪಡಿಸಿದ್ದ ಚಂಡಕಾ ಹೋಮದಲ್ಲಿ ಹೊಸನಗರ ತಾಲೂಕಿನ ಮಾಜಿ ಶಾಸಕ ಬಿ.ಸ್ವಾಮಿರಾವ್ ಹಾಗು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು. ‌

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ದಸರಾ ಹಬ್ನದ ಕೊನೆಯ ದಿನವಾದ ವಿಜಯದಶಮಿ ಆಚರಣೆ ನಾಡಿನ ಸಮಸ್ತ ಜನತೆ ಸುಖ, ಶಾಂತಿ ನೀಡಲಿ ಎಂದು ಶಾಸಕದ್ವಯರು ಪ್ರಾರ್ಥಿಸಿದ್ದು ವಿಶೇಷವಾಗಿತ್ತು.

ಈ ವೇಳೆ ದೇವಸ್ಥಾನ ಜಾತ್ರಾ ಕಾರ‍್ಯಕಾರಿ ಸಮಿತಿಯ ಅಧ್ಯಕ್ಷ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಗಣ್ಯರಿಗೆ ಶಾಲು ಹೊದಿಸಿ ಹೂಮಾಲೆ ಹಾಕಿ ಅದ್ದೂರಿಯಾಗಿ ಸ್ವಾಗತ ಕೋರಿದರು.

ಸಾವಿರಾರು ಭಕ್ತರು ಚಂಡಿಕಾ ಹೋಮದಲ್ಲಿ ಪಾಲ್ಗೊಂಡು, ದೇವಿಯ ಪ್ರಸಾದ ಸ್ವೀಕರಿಸಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಂಬರ, ಪ್ರಮುಖರಾದ ಎರಗಿ ಉಮೇಶ್, ಪ್ರಕಾಶ್ ಶೆಟ್ಟಿ, ಎನ್.ಕುಮಾರ್, ಎಂ.ಪಿ.ಸುರೇಶ್ ಸೇರಿದಂತೆ ಸಮಿತಿಯ ಹಲವು ಸದಸ್ಯರು ಉಪಸ್ಥಿತರಿದ್ದರು

Leave a Comment