ಪೊಲೀಸ್ ವರಿಷ್ಠಧಿಕಾರಿ ಕಚೇರಿಯಲ್ಲಿ ಫೋನ್ ಇನ್ ಕಾರ್ಯಕ್ರಮ
ಚಿಕ್ಕಮಗಳೂರು: ನಗರದ ಎಸ್ಪಿ ಕಚೇರಿಯಲ್ಲಿ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಫೋನ್ ಇನ್ ಕಾರ್ಯಕ್ರಮ ನಡೆದಿದ್ದು, ಹೆಚ್ಚಿನ ದೂರುಗಳು ನಗರದ ಟ್ರಾಫಿಕ್ ನಿಯಂತ್ರಣ, ಪಾರ್ಕಿಂಗ್ ವ್ಯವಸ್ಥೆಯ ಕುರಿತಾಗಿದ್ದವು.
ಪ್ರಥಮ ಕರೆ ಲಕ್ಕವಳ್ಳಿಯ ದೇವರಾಜು ಮಾಡಿದ್ದು, ಮನೆಗಳ್ಳತನದ ಬಗ್ಗೆ ಪೊಲೀಸರು ಗಮನಹರಿಸುತ್ತಿಲ್ಲ ತಕ್ಷಣ ಇದರ ತಡೆಗೆ ಮುಂದಾಗುವಂತೆ ಮಾಡಬೇಕೆಂದು ಮನವಿ ಮಾಡಿದ್ದು, ಎಸ್ಪಿ ಪ್ರತಿಕ್ರಿಯಿಸಿ ತಕ್ಷಣ ಗಮನಹರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ನಗರದ ನಿವಾಸಿ ಚೌಡಪ್ಪ ದೂರವಾಣಿ ಮೂಲಕ ದೂರು ಸಲ್ಲಿಸಿ, ನಗರದ ಐಜಿ ರಸ್ತೆ, ಎಂಜಿ ರಸ್ತೆಯಲ್ಲಿ ಜನ ಓಡಾಡುವ ರಸ್ತೆಯಲ್ಲಿಯೂ ಅನೇಕ ಅಂಗಡಿಗಳಿದ್ದು, ತೆರವಿಗೆ ಆಗ್ರಹಿಸಿದ್ದಾರೆ.