ವಿದ್ಯಾರ್ಥಿ ವೃಂದದಿಂದ ಭಕ್ತಾದಿಗಳಿಗೆ ತಂಪುಪಾನೀಯ ವಿತರಣೆ

0 90

ಚಿಕ್ಕಮಗಳೂರು : ಹಿರೇಮಗಳೂರು ಶ್ರೀ ಕೋದಂಡ ರಾಮಚಂದ್ರಸ್ವಾಮಿ ಬ್ರಹ್ಮರಥೋತ್ಸವ ಅಂಗವಾಗಿ ಮಂಗಳವಾರ ನಮ್ಮ ಸ್ನೇಹಲೋಕ ಹಿರೇಮಗಳೂರು ಹಾಗೂ ಶ್ರೀ ಪ್ರಭುಲಿಂಗ ಪ್ರೌಢಶಾಲೆ ಹಳೆಯ ವಿದ್ಯಾರ್ಥಿ ವೃಂದದ ಸದಸ್ಯರು ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ತಂಪುಪಾನೀಯ ವಿತರಿಸಿ ಬಾಯಾರಿಕೆ ನಿವಾರಿಸಿದರು.

ಬಳಿಕ ಮಾತನಾಡಿದ ವೃಂದದ ಸದಸ್ಯ ಲೋಕೇಶ್, ಕಳೆದ ಹಲವಾರು ವರ್ಷಗಳಿಂದ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕುಡಿಯುವ ನೀರು, ಟಿವಿ ಸೇರಿದಂತೆ ಇನ್ನಿತರೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದ್ದು ಇದೇ ಪ್ರಥಮ ಬಾರಿಗೆ ಸದಸ್ಯರುಗಳು ಒಗ್ಗಟ್ಟಾಗಿ ಭಕ್ತಾದಿಗಳಿಗೆ ಪಾನೀಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ವೃಂದದ ಕೃಷ್ಣಕುಮಾರ್, ನಾಗರಾಜ್, ಶೇಷೇಗೌಡ, ಗಂಗಾಧರ್, ಜಗದೀಶ್, ಹರೀಶ್, ಮಂಗಳ, ರೇಖಾ, ಬಸವರಾಜ್, ಪೂರ್ಣಿಮಾ ಮತ್ತಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!