Karnataka Rain :ಈ ಜಿಲ್ಲೆಗಳಲ್ಲಿ ಜೂನ್ 26ರವರೆಗೂ ಭಾರಿ ಮಳೆ !

Written by Koushik G K

Published on:

Karnataka Rain:ಕರ್ನಾಟಕದಲ್ಲಿ ಮುಂಗಾರು ಚಟುವಟಿಕೆ ಸ್ವಲ್ಪ ಪ್ರಮಾಣದಲ್ಲಿ ಪುನಶ್ಚೇತನಗೊಂಡಿದ್ದರೂ, ಇದೀಗ ಮತ್ತೆ ಒಣಹವೆಯ ಪ್ರಾಬಲ್ಯ ಕಾಣಿಸುತ್ತಿದೆ. ಮುಂಗಾರು ಆರಂಭವಾದ ನಂತರ ಮಳೆಯ ಪ್ರಮಾಣ ಕುಂದಿದ್ದು, ಮುಂಗಾರುಪೂರ್ವದ ಮಳೆಯೇ ಹೆಚ್ಚು ಅಬ್ಬರ ತೋರಿದೆ.

WhatsApp Group Join Now
Telegram Group Join Now
Instagram Group Join Now

ಇತ್ತೀಚಿನ ಎರಡು ದಿನಗಳಿಂದ ಮಾತ್ರ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ. ಆದರೆ ಉಳಿದ ಎಲ್ಲಾ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಒಣಹವೆಯ ಸ್ಥಿತಿಯೇ ಮುಂದುವರಿಯುತ್ತಿದೆ.

ಯಾವ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇದೆ?

ಹವಾಮಾನ ಇಲಾಖೆ ಮಾಹಿತಿ ಪ್ರಕಾರ:

ಮಳೆ ಮುಂದುವರಿಯುವ ಜಿಲ್ಲೆಗಳು (ಜೂನ್ 26ರವರೆಗೆ):

  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ಉಡುಪಿ
  • ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಸಾಧಾರಣ ಮಳೆಯು ಸಂಭವಿಸಬಹುದಾದ ಜಿಲ್ಲೆಗಳು:

  • ಬಾಗಲಕೋಟೆ
  • ಬೆಳಗಾವಿ
  • ಬೀದರ್
  • ಧಾರವಾಡ
  • ಕಲಬುರಗಿ
  • ರಾಯಚೂರು
  • ವಿಜಯಪುರ
  • ಯಾದಗಿರಿ
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಚಾಮರಾಜನಗರ
  • ಚಿಕ್ಕಮಗಳೂರು
  • ಹಾಸನ
  • ಕೊಡಗು
  • ಮೈಸೂರು
  • ಶಿವಮೊಗ್ಗ

ಒಣಹವೆ ಮುಂದುವರಿಯುವ ಜಿಲ್ಲೆಗಳು:

  • ವಿಜಯನಗರ
  • ತುಮಕೂರು
  • ರಾಮನಗರ
  • ಮಂಡ್ಯ
  • ಕೋಲಾರ
  • ದಾವಣಗೆರೆ
  • ಚಿತ್ರದುರ್ಗ
  • ಚಿಕ್ಕಬಳ್ಳಾಪುರ
  • ಬಳ್ಳಾರಿ

ಮಳೆ ಕಾಣಿಸಿಕೊಳ್ಳುವ ಪ್ರಮುಖ ಪ್ರದೇಶಗಳು:

ಉಪ್ಪಿನಂಗಡಿ, ಗೇರುಸೊಪ್ಪ, ಮಂಕಿ, ಯಲ್ಲಾಪುರ, ಆಗುಂಬೆ, ಕೊಟ್ಟಿಗೆಹಾರ, ಕಮ್ಮರಡಿ, ಭಾಗಮಂಡಲ, ಹುಂಚದಕಟ್ಟೆ, ಶಿರಾಲಿ, ಕದ್ರಾ, ಸುಳ್ಯ, ಕುಮಟಾ, ಧರ್ಮಸ್ಥಳ, ಬನವಾಸಿ, ಜೋಯ್ಡಾ, ಬೆಳ್ತಂಗಡಿ, ಹೊನ್ನಾವರ, ತ್ಯಾಗರ್ತಿ, ಖಾನಾಪುರ್, ಗುತ್ತಲ್, ಆನವಟ್ಟಿ, ಕಳಸ, ವಿರಾಜಪೇಟೆ, ಹೊಸಕೋಟೆ ಇತ್ಯಾದಿ ಪ್ರದೇಶಗಳಲ್ಲಿ ಮಳೆಯ ಸೂಚನೆ ಇದೆ.

Read More :ಎಚ್ಚರ! ನಿಮ್ಮ ಜಮೀನಿಗೆ ಬೇರೆ ಯಾರೋ ಸಾಲ ತೆಗೆದಿರಬಹುದಾ? ಇಲ್ಲಿದೆ ಪರಿಶೀಲನೆಗೆ ಸರಳ ಮಾರ್ಗ!

Leave a Comment