ಶಿವಮೊಗ್ಗ : ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮದಲ್ಲಿ ಡಾ. ಸಮೀಕ್ಷಾ ರೆಡ್ಡಿ ಅವರ ಕಾರಣವಾಗಿದ್ದ ನೀರಾನೆ ಹಂಸಿಣಿ ಇಂದು ಸಾವನ್ನಪ್ಪಿದೆ.
12 ವರ್ಷದ ನೀರಾನೆ ಹಂಸಿಣಿ ಒಂದು ತಿಂಗಳಿನಿಂದ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಮಾರ್ಚ್ 20 ನಡೆದಿದ್ದ ದುರಂತದಲ್ಲಿ ಡಾ ಸಮಿಕ್ಷಾ ರೆಡ್ಡಿ ಅವರು ಸಾವನ್ನಪ್ಪಿದ್ದರು. ಆ ಬಳಿಕ ಹಿಪ್ಪೋ ಗರ್ಭಪಾತ ಹಾಗೂ ತೀವ್ರ ಸೋಂಕಿನಿಂದ ಬಳಲುತ್ತಿದ್ದ ಹಂಸಿಣಿ ಉಳಿಸಿಕೊಳ್ಳಲು ವೈದ್ಯರು ನಿರಂತರವಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನೀರಾನೆ ಕೊನೆಯುಸಿರೆಳೆದಿದೆ.
ಶನಿವಾರದಂದು ಹಂಸಿಣಿ ಗರ್ಭದಲ್ಲೇ ಮರಿ ಮೃತಪಟ್ಟಿತ್ತು. ಆ ಬಳಿಕ ದೇಹದಾದ್ಯಂತ ವಿಷಕಾರಿ ಸೋಂಕು ಹರಡಿತ್ತು. ಬನ್ನೇರುಘಟ್ಟದ ವೈದ್ಯ ಡಾ. ಆನಂದ್ ಹಾಗೂ ಮೈಸೂರು ಮೂಲಕ ಮದನ್ ತಂಡ ಹಿಪ್ಪೋ ಉಳಿಸಲು ಪ್ರಯತ್ನಿಸಿದ್ದರು. ಆದರೆ ಡಾ.ಸಮೀಕ್ಷಾ ರೆಡ್ಡಿ ಮೃತಪಟ್ಟಾಗಲೇ ಘಾಸಿಯಾಗಿದ್ದ ನೀರಾನೆ ಆ ಬಳಿಕ ಚೇತರಿಕೆ ಕಾಣಲೇ ಇಲ್ಲ. ನಿರಂತರ ಪ್ರಯತ್ನ ನಡುವೆಯೂ ನೀರಾನೆ ಸಾವನ್ನಪ್ಪಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





