Hosanagara | ಮನೆ ಬೀಗ ಮುರಿದು ಕಳ್ಳತನ
ಹೊಸನಗರ: ತಾಲ್ಲೂಕಿನ ಎಂ ಗುಡ್ಡೆಕೊಪ್ಪ ಗ್ರಾಮದ ಮುರುಳಿಧರಭಟ್ರವರ ತೋಟದ ಮನೆಯಲ್ಲಿ ಕಳ್ಳರು ರಾತ್ರಿ ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದು ಕಳ್ಳತನ ನಡೆಸಿರುವ ಘಟನೆ ವರದಿಯಾಗಿದೆ.
ಮಂಗಳವಾರ ಮುರುಳಿಧರ್ ಭಟ್ರವರು ತೋಟದ ಮನೆಯಿಂದ ಹೊಸನಗರದ ಮನೆಗೆ ಸಂಜೆ 7ಗಂಟೆಯ ನಂತರ ಬಂದಿದ್ದಾರೆ. ಬರುವ ಸಂದರ್ಭದಲ್ಲಿ ಮನೆಯ ಮುಂಬಾಗಿನ ಬಾಗಿಲಿಗೆ ಬೀಗ ಹಾಕಿಕೊಂಡು ಬಂದಿದ್ದು ಅವರು ಹಾಗೂ ಕೆಲಸದವರು ಬುಧವಾರ ಬೆಳಿಗ್ಗೆ ಕೆಲಸಕ್ಕೆ ಬಂದ ಸಂದರ್ಭದಲ್ಲಿ ಬೀಗ ಮುರಿದಿರುವ ಬಗ್ಗೆ ಗೊತ್ತಾಗಿದ್ದು ಮನೆಯ ಮಾಲೀಕ ಮುರುಳಿಧರ್ ಭಟ್ರವರು ಹೊಸನಗರ ಠಾಣೆಗೆ ಬೀಗ ಮುರಿದಿರುವ ಬಗ್ಗೆ ದೂರು ನೀಡಿದ್ದಾರೆ.
ಮನೆಯ ಬೀಗ ಮುರಿದಿರುವ ಬಗ್ಗೆ ದೂರು ಬರುತ್ತಿದ್ದಂತೆ ಹೊಸನಗರದ ಸರ್ಕಲ್ ಇನ್ಸ್ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ ಹಾಗೂ ಎ.ಎಸ್.ಐ ಶಿವಪುತ್ರರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ತಕ್ಷಣ ಬೆರಳಚ್ಚು ತಜ್ಞರನ್ನು ಹಾಗೂ ಶ್ವಾನದಳದವರನ್ನು ಕರೆಸಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ.