ಜ.16 ರಂದು ನಾಗರಹಳ್ಳಿಯಲ್ಲಿ ಕೂಳೆ ಪಂಚಮಿ ಜಾತ್ರಾ ಮಹೋತ್ಸವ
ರಿಪ್ಪನ್ಪೇಟೆ: ಹುಂಚ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ನಾಗೇಂದ್ರ ಸ್ವಾಮಿಯ ಕೂಳೆ ಪಂಚಮಿ ಜಾತ್ರೋತ್ಸವವು ಜ. 16 ರಂದು ಮಂಗಳವಾರ ಜರುಗಲಿದೆ ಎಂದು ದೇವಸ್ಥಾನ ಧರ್ಮದರ್ಶಿ ಸಮಿತಿಯ ಸಂಚಾಲಕ ಗೇರುಗಲ್ಲು ಸತೀಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಳೆಗಾಲ ಮತ್ತು ಬೇಸಿಗೆ ಎರಡು ಕಾಲದಲ್ಲಿ ನಡೆಯುವ ನಾಗರಪಂಚಮಿ ಹಬ್ಬವು ಇಲ್ಲಿನ ನಾಗರಹಳ್ಳಿ ನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದ್ದು ಇಲ್ಲಿಗೆ ಹರಕೆ ಹೊತ್ತು ಬರುವವರ ಸಂಖ್ಯೆ ಸಹ ಹೆಚ್ಚು. ಬೇಡಿದ ವರವನ್ನು ಕೇವಲ ಆರು ತಿಂಗಳಲ್ಲಿ ಈಡೇರಿಸುವ ಕರುಣಾಮಯಿ ನಾಗೇಂದ್ರ ಸ್ವಾಮಿಯ ಕೂಳೆ ಪಂಚಮಿ ಜಾತ್ರೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿ ದೇವರ ದರ್ಶನಾಶೀರ್ವಾದ ಪಡೆಯುವಂತೆ ಅವರು ಕೇಳಿಕೊಂಡಿದ್ದಾರೆ.