ರಿಪ್ಪನ್ಪೇಟೆಯಲ್ಲಿ ಅಯೋಧ್ಯೆ ಮಹಾಸಂಪರ್ಕ ಅಭಿಯಾನ
ರಿಪ್ಪನ್ಪೇಟೆ: ಅಯೋಧ್ಯೆಯ ಶ್ರೀರಾಮ ಮಂದಿರ ಪ್ರತಿಷ್ಠಾಪನೆಯ ಅಂಗವಾಗಿ ಮನೆಮನೆಗೆ ಮಂತ್ರಾಕ್ಷತೆ ಹಂಚೋಣ ಮನೆ-ಮನಕ್ಕೆ ರಾಮನಾಮವ ಪಸರಿಸೋಣ ಎಂಬ ಜಯಘೋಷಣೆಯೊಂದಿಗೆ ರಿಪ್ಪನ್ಪೇಟೆಯಲ್ಲಿ ಭರ್ಜರಿಯಾಗಿ ಮಹಾಸಂರ್ಕ ಅಭಿಯಾನ ನಡೆಸಲಾಗುತ್ತಿದೆ ಎಂದು ಮಹಾಶಕ್ತಿಕೇಂದ್ರ ಅಧ್ಯಕ್ಷ ಎಂ.ಬಿ.ಮಂಜುನಾಥ ಹೇಳಿದರು.
ರಿಪ್ಪನ್ಪೇಟೆಯ ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಿಂದ ವ್ಯಾಪ್ತಿಯ ಮಹಾಸಂಪರ್ಕ ಅಭಿಯಾನವು ಬನ್ನಿನಗರ, ವಿದ್ಯಾನಗರ, ದೊಡ್ಡಿನಕೊಪ್ಪ, ಶಬರೀಶ್ನಗರ, ತೀರ್ಥಹಳ್ಳಿ ರಸ್ತೆ ಗಾಂಧಿನಗರ ಶ್ರೀರಾಮನಗರ ಹೊಸನಗರ ರಸ್ತೆ ಗವಟೂರು ನೆಹರು ಬಡಾವಣೆ ಬರುವೆ ಚೌಡೇಶ್ವರಿ ಬೀದಿ ತಲುಪಿತು.
ವಿಶ್ವಹಿಂದೂ ಪರಿಷತ್ ಮತ್ತು ಬಿಜೆಪಿ ಪಕ್ಷದ ಮುಖಂಡರಾದ ನಾಗರತ್ನ ದೇವರಾಜ್, ಲೀಲಾಶಂಕರ್, ಶೈಲಾ ಆರ್.ಪ್ರಭು, ಕಗ್ಗಲಿ ಲಿಂಗಪ್ಪ, ಪದ್ಮಾ ಸುರೇಶ, ರೇಖಾ ರವಿ, ಮಂಜುಳಾ ಕೇತಾರ್ಜಿ, ಗೀತಾ ಕರಿಬಸಪ್ಪ, ಸುಂದರೇಶ್, ಸುಧೀಂದ್ರ ಪೂಜಾರಿ, ಸೀತಾ, ಶಿಲ್ಪ, ನಾಗರಾಜ್ ಪವಾರ್, ರಾಮಚಂದ್ರ, ಕೆ.ಬಿ.ಹೂವಪ್ಪ, ಕುಷನ್ ದೇವರಾಜ್, ಶ್ರೀನಿವಾಸ ಆಚಾರ್, ಈಶ್ವರಮಳಕೊಪ್ಪ, ಸುಧೀರ್, ರಾಮು ಬಳೆಗಾರ್, ದೀಪಾ ಸುಧೀರ್, ಮುರುಳಿ ಕೆರೆಹಳ್ಳಿ, ಲಕ್ಷ್ಮಿ ಶ್ರೀನಿವಾಸ್ ಆಚಾರ್, ಹೆಚ್.ಎನ್.ಚೋಳರಾಜ್, ಜಿ.ಡಿ.ಮಲ್ಲಿಕಾರ್ಜುನ, ದೀಪು ಸುಧೀರ್ ಇನ್ನಿತರರು ಹಾಜರಿದ್ದರು.