ಪೂರ್ವಜರ ಕಠಿಣ ಪರಿಶ್ರಮದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ‌ ; ಡಿ.ಆರ್ ಯೂಸುಫ್

0 40


ಹೊಸನಗರ: ನಮಗೆ ಸ್ವಾತಂತ್ರ್ಯವು ಸುಲಭವಾಗಿ ಸಿಕ್ಕಿಲ್ಲ ಪೂರ್ವಜರ ಕಠಿಣ ಪರಿಶ್ರಮದ ಜೊತೆಗೆ ಛಲ ಮನಸ್ಸಿನಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಅದನ್ನು ಇಂದಿನ ಯುವ ಜನತೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ಬದ್ರಿಯಾ ಜುಮ್ಮ ಮಸೀದಿಯ ಗೌರವಾಧ್ಯಕ್ಷರಾದ ಡಿ.ಆರ್ ಯೂಸುಫ್‌ರವರು ಹೇಳಿದರು.

ಪಟ್ಟಣದ ಬದ್ರಿಯಾ ಜುಮ್ಮ ಮಸೀದಿಯ ಆವರಣದಲ್ಲಿ ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಬರೀ ಆಚರಣೆ ಮಾಡಿ ಸುಮ್ಮನಿದ್ದರೇ ಸಾಲದು ನಮ್ಮ ಜೀವನದಲ್ಲಿ ಹಿರಿಯರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಳ್ಳುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕು ಹಾಗೂ ದೇಶ ಪ್ರೇಮ ಜೊತೆಗೆ ದೇಶದ ಮಣ್ಣಿನ ಋಣ ನಮ್ಮ ಮೇಲಿದೆ ನಾವು ವಾಸ ಮಾಡುವ ಊರು, ರಾಜ್ಯ, ದೇಶವನ್ನು ಪ್ರೀತಿ ಮಾಡಬೇಕು ಈ ದೇಶಕ್ಕೆ ಆಪತ್ತು ಬಂದಾಗ ಅದನ್ನು ಎದುರಿಸುವ ಶಕ್ತಿ ನಮ್ಮಲ್ಲಿರಬೇಕು ಇದು ನಮಗೆ ಮಹಮದ್ ಪೈಗಂಬರ್ ಹೇಳಿಕೊಟ್ಟ ಪಾಠ ಅದನ್ನು ಮೈಗೂಡಿಸಿಕೊಂಡು ಹಿರಿಯರು ಹೇಳಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕೆಂದರು.


ಈ 77ನೇ ಸ್ವಾತಂತ್ರ್ಯ ಕಾರ್ಯಕ್ರಮದಲ್ಲಿ ಮಸೀದಿಯ ಧರ್ಮಗುರುಗಳಾದ ಡಿ.ಎಂ ಅಬೂಬಕರ್ ಮದನಿ ಹಾಗೂ ಬದುರುದ್ದೀನ್ ಝುಹರಿ, ಕಮಿಟಿಯ ಅಧ್ಯಕ್ಷರಾದ ಅಮಾನುಲ್ಲಾ ಹಾಗೂ ಅಹಮದ್ ಸಾಬ್ ಯೂಸುಬ್‌ಸಾಬ್, ಇಸ್ಮಾಯಿಲ್, ಅಬ್ದುಲ್ ರಹೂಫ್, ಯಾಸಿರ್ ಯಾಸೀರ್, ಇಬ್ರಾಹಿಂ ಉಸ್ಮಾನ್ ಸಾಬ್, ಹಯಾತುಲ್ ಇಸ್ಲಾಂ ಅರಬ್ಬಿ ಮದರಸದ ವಿದ್ಯಾರ್ಥಿಗಳು ಹಾಗೂ ಊರಿನ ಹಲವಾರು ಪ್ರಮುಖರು ಬಾಗವಹಿಸಿದರು.

Leave A Reply

Your email address will not be published.

error: Content is protected !!