ಹೃದಯಾಘಾತ ; ನಾಗರತ್ನಮ್ಮ ನಿಧನ
ಹೊಸನಗರ : ಈ ಹಿಂದೆ ಪಟ್ಟಣದ ಆರ್.ಕೆ ರಸ್ತೆಯಲ್ಲಿ ವಾಸವಾಗಿದ್ದ ಪ್ರಸ್ತುತ ತಾಲ್ಲೂಕಿನ ಮಳವಳ್ಳಿಯಲ್ಲಿ ವಾಸವಾಗಿರುವ ನಾಗರತ್ನಮ್ಮ (69) ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಇವರ ಪತಿ ಶುಂಠಿ ಗೋವಿಂದಣ್ಣರವರಾಗಿದ್ದು ಎರಡು ಗಂಡು ಮಕ್ಕಳು ಒಂದು ಹೆಣ್ಣು ಮಗಳನ್ನು ಹಾಗೂ ಅಪಾರ ಬಂಧು-ಬಳಗದವರನ್ನು ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.
ಸಂತಾಪ:
ಇವರ ನಿಧನಕ್ಕೆ ಹೊಸನಗರ-ಸಾಗರ ಕ್ಷೇತ್ರದ ಮಾಜಿ ಶಾಸಕರಾದ ಹರತಾಳು ಹಾಲಪ್ಪ, ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಶಿದರ್ ನಾಯ್ಕ್, ಕಾರ್ಯದರ್ಶಿ ಹೆಚ್.ಆರ್.ಸುರೇಶ್ ಗೌರವಾಧ್ಯಕ್ಷ ಬಿ. ಗೋವಿಂದಪ್ಪ, ಸಂಘದ ಉಪಾಧ್ಯಕ್ಷ ಸಂಜೀವಣ್ಣ, ಹೆಚ್ ಮಹಾಬಲ, ಹೆಚ್. ಮಹಾಬಲರಾವ್, ವಿಠೋಬಾ ನಾಯ್ಕ, ದಿನಮಣಿ, ಎಲ್ಲ ನಿರ್ದೇಶಕರು ಸದಸ್ಯರು ಮೃತರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ.