ಯುವತಿಯ ಚಿಕಿತ್ಸೆಗೆ ಬೇಕು ಆರ್ಥಿಕ ನೆರವು

0 1,155

ರಿಪ್ಪನ್‌ಪೇಟೆ : ಇಲ್ಲಿನ ಕೋಡೂರು ಗ್ರಾಪಂ ವ್ಯಾಪ್ತಿಯ ಕರಿಗೆರಸು ಗ್ರಾಮದ ಹಿಂಡ್ಲೆಮನೆ ನಿವಾಸಿ ಶಂಕರಪ್ಪ ಮತ್ತು ಸಾವಿತ್ರಿ ದಂಪತಿಯ ಪುತ್ರಿ ಕು|| ಮಾಲಿನಿ ಇವರು ಫೆ.10 ರಂದು ಮಧ್ಯಾಹ್ನ ಬೈಕ್‌ನಲ್ಲಿ ಹೋಗುವಾಗ ಹೊಸನಗರದ ಅರೋಡಿ ಬಳಿ ರಸ್ತೆ ಅಪಘಾತವಾಗಿ ಕಾಲಿನ ಮೂಳೆ ಮುರಿದಿರುತ್ತದೆ.

ತೀವ್ರ ಗಾಯಗೊಂಡ ಇವರನ್ನು ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗಾಗಿ ಲಕ್ಷಾಂತರ ರೂ. ವೆಚ್ಚವಾಗಲಿದೆ ಎಂದು ಮಣಿಪಾಲ ಆಸ್ಪತ್ರೆ ವೈದ್ಯರು ಹೇಳಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ.

ಅವರ ಕುಟುಂಬ ಮಾಲಿನಿಯ ದುಡಿಮೆಯಿಂದಲೇ ಸಾಗಬೇಕು. ಜೊತೆಗೆ ಮಾಲಿನಿಯ ತಂದೆ ಅಂಗವಿಕಲರಾಗಿದ್ದು ತಾಯಿಗೂ ಥೈರಾಯ್ಡ್ ಸಂಬಂಧಿ ಕಾಯಿಲೆಯಿಂದ ಇತ್ತೀಚೆಗೆ ಶಸ್ತ್ರ ಚಿಕಿತ್ಸೆಯಾಗಿದ್ದು ಅವರು ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ದಿನದ ದುಡಿಮೆಯಿಂದ ಜೀವನ ಸಾಗಿಸುವ ಕುಟುಂಬಕ್ಕೆ ಮಗಳ ಚಿಕಿತ್ಸೆಗಾಗಿ ಹಣದ ಅಗತ್ಯವಿದ್ದು ದಾನಿಗಳ, ಸಂಘಟನೆಗಳ ಆರ್ಥಿಕ ನೆರವಿನ ಸಹಾಯದ ನಿರೀಕ್ಷೆಯಲ್ಲಿ ಕುಟುಂಬವಿದೆ.

ಕಡು ಬಡ ಕುಟುಂಬದವರಾದ ನಮಗೆ ಆಸ್ಪತ್ರೆ ವೆಚ್ಚವನ್ನು ಹೊಂದಿಸಲು ಸಾಧ್ಯವಾಗದೆ ಇರುವುದರಿಂದ ನಿಮ್ಮ ಕೈಲ್ಲಾದಷ್ಟು ಸಹಾಯ ಧನ ಮಾಡುವಂತೆ ವಿನಂತಿಸಿದ್ದಾರೆ.

ಸಹಾಯಧನ ಮಾಡಲಿಚ್ಚಿಸುವವರು
Google pay Number : 8088648500 (Malini H S) ಗೆ ಹಣ ಜಮೆ ಮಾಡಬಹುದು ಎಂದು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!