ಸಂಸದ ಬಿ.ವೈ.ರಾಘವೇಂದ್ರರನ್ನು ಸನ್ಮಾನಿಸಿ ಅಭಿನಂದಿಸಿದ ಮಳವಳ್ಳಿ ಗ್ರಾಮಸ್ಥರು
ರಿಪ್ಪನ್ಪೇಟೆ: ಫೆ. 24 ರಂದು ಮಳವಳ್ಳಿ ಶ್ರೀಮಹಾಲಿಂಗೇಶ್ವರ ಮತ್ತು ಬಸವಣ್ಣ ದೇವರ ಪುನರ್ ಪ್ರತಿಷ್ಟಾಪನಾ ಕಾರ್ಯಕ್ರಮ ಮತ್ತು ಧರ್ಮ ಸಮಾರಂಭಕ್ಕೆ ಸಂಸದ ಬಿ.ವೈ.ರಾಘವೇಂದ್ರ ಇವರನ್ನು ಮಳವಳ್ಳಿ ದೇವಸ್ಥಾನ ಸೇವಾ ಸಮಿತಿಯವರು ಆಹ್ವಾನಿಸಿದ್ದು ಕಾರ್ಯದ ಒತ್ತಡದಿಂದಾಗಿ ಸಂಸದ ರಾಘವೇಂದ್ರರವರು ಗೈರು ಹಾಜರಾಗಿದ್ದು ಇಂದು ಸಮಿತಿಯವರು ಶಿಕಾರಿಪುರದ ಸ್ವಗೃಹದಲ್ಲಿ ಸಂಸದರನ್ನು ಭೇಟಿ ಮಾಡಿ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಆಲುವಳ್ಳಿ, ಗ್ರಾಮ ಪಂಚಾಯ್ತಿ ಸದಸ್ಯ ಚಂದ್ರಶೇಖರ ಮಳವಳ್ಳಿ, ನಾಗಭೂಷಣ, ರಾಜು, ಎಂ.ಆರ್.ರಾಜಶೇಖರ, ಎಂ.ಜಿ. ಆದರ್ಶ, ಉಮೇಶ,ವಿಜಯ ಮಳವಳ್ಳಿ, ಉಮಾಪತಿ ಇನ್ನಿತರ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.