ಹಾಲುಗುಡ್ಡೆ ಶ್ರೀಹಾಲೇಶ್ವರ ಮಹಾದ್ವಾರ ಲೋಕಾರ್ಪಣೆ

0 539

ರಿಪ್ಪನ್‌ಪೇಟೆ: ಸಮೀಪದ ಹಾಲುಗುಡ್ಡೆ ಗ್ರಾಮದಲ್ಲಿ ನಾರಮ್ಮ ನಾಗಪ್ಪಗೌಡ ಇವರ ಪುತ್ರಿ ಸ್ವರ್ಗಸೃಷ್ಠಿ ಸಂಸ್ಥೆಯ ಅಧ್ಯಕ್ಷೆ ಯಶೋಧಮ್ಮ ಹಾಗೂ ಸಹೋದರ ಸಹೋದರಿಯರು 5.50 ಲಕ್ಷ ರೂ. ವೆಚ್ಚದಲ್ಲಿ ಹಾಲುಗುಡ್ಡೆ ಗ್ರಾಮದ ಪ್ರವೇಶದ್ವಾರವನ್ನು ಕೊಡುಗೆಯಾಗಿ ನೀಡಿ ನಿರ್ಮಿಸಲಾಗಿದ್ದು ಈ ಮಹಾದ್ವಾರವನ್ನು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಲೋಕಾರ್ಪಣೆಗೊಳಿಸಿದರು.

ಲೋಕಾರ್ಪಣೆಯ ನಂತರ ಶ್ರೀಗಳು ಆಶೀರ್ವಚನ ನೀಡಿ, ದುಡಿಮೆಯ ಅಲ್ಪಸ್ವಲ್ಪ ಹಣವನ್ನು ದಾನ ಮಾಡುವುದರೊಂದಿಗೆ ನಾಲ್ಕು ಜನ ಹೇಳುವಂತಾಗಬೇಕು ಆಗ ದಾನವಾಗಿ ಕೊಟ್ಟವರು ಸಂತೃಪ್ತಿಗೊಂಡು ತಾವು ಕೊಟ್ಟಂತಹ ದಾನ ಸಮರ್ಥವಾಗಿ ಸಾರ್ಥಕವಾಗುವುದೆಂಬುದಕ್ಕೆ ಸ್ವರ್ಗ ಸೃಷ್ಠಿ ಸಂಸ್ಥೆಯ ಅಧ್ಯಕ್ಷೆ ಯಶೋಧಮ್ಮನವರು ಸಾಕ್ಷಿಯಾಗಿದ್ದಾರೆಂದು ಹೇಳಿ, ಈ ರೀತಿಯಲ್ಲಿ ತಮ್ಮ ತವರು ಊರಿನ ಮಗಳು ಇಂತಹ ಸಾಧನೆ ಊರಿನವರಿಗೆ ಹರ್ಷವನ್ನುಂಟುಮಾಡಿದೆ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಕೊಡಗೈದಾನಿ ಯಶೋಧಮ್ಮ ಹಾಗೂ ಕುಟುಂಬದ ಸಹೋದರ, ಸಹೋದರಿಯರು ಹಾಗೂ ಹಾಲೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರು ಸದಸ್ಯರು ಹಾಲುಗುಡ್ಡೆ ಮತ್ತು ಬಾಳೂರು ಗ್ರಾಮಸ್ಥರು ಹಾಜರಿದ್ದರು.

Leave A Reply

Your email address will not be published.

error: Content is protected !!