Hosanagara | ಕೊಡಚಾದ್ರಿ ಕಾಲೇಜಿನ ಪರಿಸರ ವೀಕ್ಷಿಸಿ ಗರಂ ಆದ ಶಾಸಕ ಬೇಳೂರು
ಹೊಸನಗರ : ಇಲ್ಲಿನ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದ ಶಾಸಕ ಬೇಳೂರು ಗೋಪಾಲಕೃಷ್ಣ ಪರಿಸರವನ್ನು ವೀಕ್ಷಿಸಿ ಸ್ವಚ್ಛತೆ ಹಾಗೂ ನಿರ್ವಹಣಾ ಕಾರ್ಯದ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಅಧಿಕಾರಿಗಳ ವಿರುದ್ಧ ಗರಂ ಆದರು.
ವಿದ್ಯಾಲಯವೆಂದರೆ ದೇವಾಲಯವಿದ್ದಂತೆ ನಿಮ್ಮ ಮನೆಗಳಿಗಿಂತ ಹೆಚ್ಚು ಸ್ವಚ್ಛತೆಯನ್ನು ಕಾಪಾಡಬೇಕೆಂದು ತಿಳಿ ಹೇಳಿದರು.
ಇದೇ ಸಂದರ್ಭದಲ್ಲಿ ಕಾಲೇಜು ಕಟ್ಟಡದ ಮೇಲ್ದರ್ಜೆ ಕಾಮಗಾರಿ ಹಾಗೂ ನೂತನ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ, ಕಾಲೇಜಿನ ಕಾರ್ಯವೈಕರಿಗಳ ಬಗ್ಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಕೆ ಉಮೇಶ್ ಸಿಬ್ಬಂದಿ ವರ್ಗ ಕಾಲೇಜು ಅಭಿವೃದ್ಧಿ ಸಮಿತಿಯ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಹಿಟಾಚಿ ಶ್ರೀಧರ್, ಡಾ. ಪ್ರವೀಣ್, ಕವಿತಾ ಪ್ರವೀಣ್, ಎರಗಿ ಉಮೇಶ್, ಮಹೇಂದ್ರ, ನಾಗೇಶ್, ಪ್ರವೀಣ, ಸದಾಶಿವ ಶ್ರೇಷ್ಟಿ, ಮಂಜುನಾಥ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.