ಹೊಸನಗರ ; ನಿವೃತ್ತ ಶಿಕ್ಷಕ ಎಸ್ ಕುಮಾರಸ್ವಾಮಿ ಇನ್ನಿಲ್ಲ !

0 59

ಹೊಸನಗರ : ಶಿಸ್ತು ಬದ್ಧ ಜೀವನದ ಮೂಲಕ ಜನಾನುರಾಗಿಯಾಗಿದ್ದ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಎಸ್ ಕುಮಾರಸ್ವಾಮಿ (80) ಸೋಮವಾರ ರಾತ್ರಿ 7:45 ರ ಸುಮಾರಿಗೆ ಕೊನೆಯುಸಿರೆಳೆದರು.

ಮೃತರು ಪತ್ನಿ, ಪುತ್ರಿ, ಇಬ್ಬರು ಪುತ್ರರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ

ತೀರ್ಥಹಳ್ಳಿ ತಾಲೂಕಿನ ಮತ್ತಿಗ, ಕುರವಳ್ಳಿ, ಸಾಗರ ತಾಲೂಕಿನ ಪಡವಗೋಡು, ಹೊಸನಗರದ ಎಂ ಗುಡ್ಡೆಕೊಪ್ಪ, ರಾಮಚಂದ್ರಪುರ ಶಾಲೆಗಳಲ್ಲಿ ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದ ಕುಮಾರಸ್ವಾಮಿ ಅವರು, ಮಾನವ ಹಕ್ಕುಗಳ ಹೋರಾಟ ಸಮಿತಿ, ಪ್ರಾಥಮಿಕ ಶಾಲೆ ಶಿಕ್ಷಕರ ನಿವೃತ್ತ ನೌಕರರ ಸಂಘ ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಸಾಮಾಜಿಕ ವಲಯದಲ್ಲಿ ಗುರುತಿಸಿಕೊಂಡಿದ್ದರು.

ಕುಮಾರಸ್ವಾಮಿ ಅವರ ನಿಧನಕ್ಕೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರಾಜ್ಯ ಸರ್ಕಾರಿ ನೌಕರರ ಸಂಘ, ತಾಲೂಕು ಕುಂಬಾರರ ಸಂಘಗಳು ತೀವ್ರ ಸಂತಾಪ ಸೂಚಿಸಿದೆ.

ಮಂಗಳವಾರ ಬೆಳಿಗ್ಗೆ ಮೃತರ ಅಂತ್ಯಕ್ರಿಯೆ ನಡೆಯಿತು.

Leave A Reply

Your email address will not be published.

error: Content is protected !!