ಅಮೃತ ಗ್ರಾ.ಪಂ. ಅಧ್ಯಕ್ಷರಾಗಿ ವಿಶ್ವ ಗಂದ್ರಳ್ಳಿ ಉಪಾಧ್ಯಕ್ಷೆಯಾಗಿ ವಿನೋಧ ಆಯ್ಕೆ

0 69



ರಿಪ್ಪನ್‌ಪೇಟೆ: ಸಮೀಪದ ಅಮೃತ ಗ್ರಾಮ ಪಂಚಾಯ್ತಿ ಎರಡನೇ ಅವಧಿಗೆ ನಡೆದ ಆಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಇಂದು ಚುನಾವಣೆ ನಡೆಯಿತು.


ನೂತನ ಆಧ್ಯಕ್ಷರಾಗಿ ವಿಶ್ವ ಗಂದ್ರಳ್ಳಿ ಅವಿರೋಧವಾಗಿ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ವಿನೋಧ ಸಿ.ಪಿ.ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ತಾಲ್ಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನಾಗರಾಜ್ ಘೋಷಿಸಿದರು.


ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ವಿನೋಧರಿಗೆ 8 ಮತಗಳು ಎದುರಾಳಿಗೆ 3 ಮತಗಳು ಬಂದಿವೆ.
ಈ ಸಂದರ್ಭದಲ್ಲಿ ಪಿಡಿಓ ಸುಧಾ ಮತ್ತು ಗ್ರಾಮ ಪಂಚಾಯ್ತಿ ಸದಸ್ಯರು ಹಾಜರಿದ್ದರು.


ಬಾಳೂರು ಗ್ರಾ.ಪಂ.ಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ


ರಿಪ್ಪನ್‌ಪೇಟೆ : ಸಮೀಪದ ಬಾಳೂರು ಗ್ರಾಮ ಪಂಚಾಯ್ತಿ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಿತು.
ಆಧ್ಯಕ್ಷರಾಗಿ ಶ್ರೀನಿವಾಸ ಆಚಾರ್ ಮತ್ತು ಉಪಾಧ್ಯಕ್ಷರಾಗಿ ವೇದಾವತಿ ಬಾಲಚಂದ್ರ ಆಯ್ಕೆಯಾಗಿದ್ದಾರೆ.

Leave A Reply

Your email address will not be published.

error: Content is protected !!