ಮೇಯಲು ಹೋದ ಎಮ್ಮೆಗಳ ನಿಗೂಢ ಸಾವು ; ವಿಷ ಹಾಕಿ ಕೊಂದಿರುವ ಶಂಕೆ
ರಿಪ್ಪನ್ಪೇಟೆ: ಮೇಯಲು ಬಿಟ್ಟ ಎಮ್ಮೆಗಳು ಮನೆಗೆ ವಾಪಾಸ್ಸು ಬಾರದಿರುವುದನ್ನು ಕಂಡು ಗಾಬರಿಯಿಂದ ಕಳೆದ ಒಂದು ವಾರ ಹುಡುಕಾಡಿದ್ದರೂ ಎಮ್ಮೆಗಳ ಸುಳಿವು ಕಾಣದೇ ಇದ್ದು ನಂತರ ತಮ್ಮಡಿಕೊಪ್ಪ ಗ್ರಾಮದ ಪುರಮಠ ಎಂಬಲ್ಲಿ ಕಾಡಿನಲ್ಲಿ ಸತ್ತು ಬಿದ್ದಿರುವುದರ ಬಗ್ಗೆ ಖಚಿತ ಮಾಹಿತಿಯನ್ನಾದರಿ ನೋಡಿದಾಗ ಎಮ್ಮೆಗಳಿಗೆ ವಿಷ ಹಾಕಿ ಕೊಂದಿದ್ದಾರೆಂದು ಶಂಕೆ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಮ್ಮಡಿಕೊಪ್ಪ ಗ್ರಾಮದ ರಾಜು ಬಿನ್ ನಾಗೇಂದ್ರಪ್ಪ ಎಂಬುವವರಿಗೆ ಸೇರಿದ ಮೂರು ಎಮ್ಮೆಗಳಾಗಿದ್ದು ದುರುದ್ದೇಶದಿಂದ ಈ ರೀತಿಯ ಕೃತ್ಯ ಎಸಗಿದ್ದಾರೆನ್ನಲಾಗಿದೆ. ರಿಪ್ಪನ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.