ಗುಡುಗು ಸಿಡಿಲಾರ್ಭಟದೊಂದಿಗೆ ಸುರಿದ ಮುಸಲಧಾರೆ

0 332

ರಿಪ್ಪನ್‌ಪೇಟೆ: ಬೆಳ್ಳಂಬೆಳಗ್ಗೆ ಗುಡುಗು ಸಿಡಿಲಾರ್ಭಟದೊಂದಿಗೆ ಭಾರಿ ಮಳೆ ಸುರಿದು ಇಳೆ ತಂಪುಗೊಳಿಸಿತು.

ಕಳೆದ ಎರಡ್ಮೂರು ದಿನಗಳಿಂದ ಮಲೆನಾಡಿನ ವ್ಯಾಪ್ತಿಯಲ್ಲಿ ಗಾಳಿ ಗುಡುಗು ಸಿಡಿಲು ಸಹಿತ ಮಳೆಯಾಗುತ್ತಿದ್ದು ಅಲ್ಲಲ್ಲಿ ಮರಗಳ ರೆಂಬೆ-ಕೊಂಬೆಗಳು ಉರುಳಿ ಬೀಳುತ್ತಿದ್ದು ಇಲ್ಲಿನ ಸಾಗರ ರಸ್ತೆಯ ಅಂದಾಸುರ ಬಳಿಯಲ್ಲಿ ಅಕೇಶಿಯ ಮರವೊಂದು 11 ಕೆ.ವಿ.ಲೈನ್ ಮೇಲೆ ಬಿದ್ದಿದ್ದು ಲೋಕೋಪಯೋಗಿ ಇಲಾಖೆಯವರಾಗಲಿ, ಅರಣ್ಯ ಇಲಾಖೆಯವರಾಗಲಿ ಗಮನಹರಿಸದೇ ಇರುವುದರಿಂದ ಯಾವಾಗ ಯಾರ ಮೇಲೆ ಮರ ಬೀಳುತ್ತದೋ ಎಂಬ ಜೀವ ಭಯದಲ್ಲಿ ಓಡಾಡುವಂತಾಗಿದೆ.

ಈ ಬಗ್ಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಗಮನಕ್ಕೆ ತರಲಾದರೂ ಕೂಡಾ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿರುವುದರ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಸುವಂತಾಗಿದೆ

Leave A Reply

Your email address will not be published.

error: Content is protected !!