ಹೊಸನಗರದಲ್ಲಿ 10ನೇ ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ | ಮಕ್ಕಳನ್ನು ಸಮಾಜದ ಏಳಿಗೆಗೆ ಪ್ರಯತ್ನಿಸುವಂತೆ ಮಾಡುವುದು ಸಾಹಿತ್ಯದ ಶಕ್ತಿ ; ಅರ್ಜುನ್‌ರಾಜ್

0 757

ಹೊಸನಗರ: ಮಕ್ಕಳಲ್ಲಿ ಹುದುಗಿರುವ ಅಮೂಲ್ಯವಾದ ಸಾಹಿತ್ಯ ಶಕ್ತಿಯನ್ನು ವೃದ್ಧಿಪನಗೊಳಿಸಿ ಮಕ್ಕಳನ್ನು ಕೂಡ ಸಮಾಜದ ಏಳಿಗೆಗೆ ಪ್ರಯತ್ನಿಸುವಂತೆ ಮಾಡುವುದು ಸಾಹಿತ್ಯದ ಶಕ್ತಿ ಎಂದು 10ನೇ ತರಗತಿಯ ವಿದ್ಯಾರ್ಥಿ ಅರ್ಜುನ್‌ರಾಜ್‌ರವರು ಹೇಳಿದರು.

ಪಟ್ಟಣದ ಹೊರವಲಯದ ಮಾವಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತೀಕ ವೇದಿಕೆ ಕನ್ನಡ ಸಾಹಿತ್ಯ ಪರಿಷತ್, ತಾಲ್ಲೂಕು ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಮಾವಿನಕೊಪ್ಪ, ಕರ್ನಾಟಕ ಜಾನಪದ ಪರಿಷತ್ ಅಕಾಡೆಮಿ ಆಫ್ ಬಿದನೂರು ಕಲ್ಚರ್ ನಗರ, ಮಲೆನಾಡು ವಾಯ್ಸ್ ಪತ್ರಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಹೊಸನಗರ ತಾಲ್ಲೂಕು 10ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯವು ಪಂಪನಿಂದ ಕುವೆಂಪುರವರ ವಿಶಾಲವಾದ ಒಂದು ಹಾದಿಯಾಗಿದೆ ಹಾದಿಯನ್ನು ನಾವು ಜೋಪಾನವಾಗಿ ಕಾಪಾಡಿಕೊಂಡು ಮುನ್ನಡೆಸಿಕೊಂಡು ಹೋಗಬೇಕು ಮಕ್ಕಳಲ್ಲಿ ಬಾಲ್ಯದಲ್ಲಿಯೇ ಸಾಹಿತಿಕ ಆಸಕ್ತಿಯನ್ನು ಹುಟ್ಟಿಸಿ ಅವರು ಕೂಡ ಸಾಹಿತಿಕ ಕೊಡುಗೆ ಈ ದೇಶಕ್ಕೆ ನೀಡುವಂತೆ ಪ್ರೇರೇಪಿಸುವಂತೆ ಮಾಡಬೇಕು. ಮಕ್ಕಳಿಗೆ ಸಾಹಿತ್ಯದ ಬಗ್ಗೆ ಸಣ್ಣ ಮಕ್ಕಳಿರುವಾಗಲೆ ಅರಿವು ಮೂಡಿಸಿದರೇ ಮುಂದೆ ಸಾಹಿತ್ಯ ಕ್ಷೇತ್ರ ಬೆಳೆಸಲು ಸಾದ್ಯ ಎಂದರು.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಕ್ಕಳ ಕೊಡಿಗೆ ಅಮೂಲ್ಯ: ಕು|| ಯಶಸ್ವಿನಿ ಓ.ಕೆ
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಕ್ಕಳ ಕೊಡಿಗೆ ಅಮೂಲ್ಯವಾಗಿದ್ದು ಮಕ್ಕಳನ್ನು ಸಾಹಿತ್ಯ ಕ್ರೇತ್ರದೊಂದಿಗೆ ಸೇರಿಸಿಕೊಂಡು ಕನ್ನಡ ಸಾಹಿತ್ಯವನ್ನು ಬೆಳೆಸಬೇಕಾಗಿದೆ ಎಂದು 10ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಕು|| ಯಶಸ್ವಿನಿ ಓ.ಕೆ ಹೇಳಿದರು.

ಈ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಮಾತನಾಡಿ, ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ಮಕ್ಕಳನ್ನು ಕೂಡ ಸಾಹಿತ್ಯಕ್ಕಾಗಿ ಪ್ರೋತ್ಸಾಹ ನೀಡುವುದರಿಂದ ಸಾಹಿತ್ಯದ ಬೆಳವಣಿಗೆ ಕಾಣಬಹುದು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಯಾವಾಗಲೂ ಯಶಸ್ವಿಯಾಗಿ ಆಚರಣೆಯಾಗಬೇಕು. ಮಕ್ಕಳಲ್ಲಿ ಹೆಚ್ಚಿನ ಆಸಕ್ತಿ ಮೂಡುವಂತೆ ಶಾಲೆಯ ಶಿಕ್ಷಕ ವರ್ಗ ಪ್ರೇರೇಪಣೆ ಮಾಡಬೇಕು. ಇದಕ್ಕೆ ಪೋಷಕರು ಕೈಜೋಡಿಸಬೇಕು ಮಕ್ಕಳ ಪಠ್ಯ ಪುಸ್ತಕಗಳನ್ನು ಓದುವುದರ ಜೊತೆಗೆ ಸಾಹಿತ್ಯವನ್ನು ಕೂಡ ಓದಬೇಕು ಬರೆಯುವ ಅಭ್ಯಾಸ ಮಾಡಿಕೊಳ್ಳಬೇಕುಲ ಆಗ ಮಾತ್ರ ಹಿಂದಿನವರು ಹಾಕಿಕೊಟ್ಟ ಸಾಹಿತ್ಯದ ಮೆಲುಕು ನಮ್ಮಂತವರು ಮುಂದುವರೆಸಿಕೊಂಡು ಹೋಗಬಹುದು ಆದ್ದರಿಂದ ಎಲ್ಲ ಮಕ್ಕಳು ಸಾಹಿತ್ಯಕ್ಕೆ ಒಲವು ತೋರಿಸುವುದರ ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಿ ಎಂದರು.

ಹೊಸನಗರ ಪದವಿ ಪೂರ್ವ ಕಾಲೇಜ್ ಹೈಸ್ಕೂಲ್ ವಿಭಾಗದ ಆವರಣದಿಂದ ಪ್ರಮುಖ ಬೀದಿಗಳಲ್ಲಿ ಸಮ್ಮೆಳನಾಧ್ಯಕ್ಷರ ಹಾಗೂ ಉದ್ಘಾಟಕರ ಮೆರವಣಿಗೆಯನ್ನು ಎಲ್ಲ ಸಂಘ ಸಂಸ್ಥೆಗಳ ಹಾಗೂ ಶಾಲಾ ವಿದ್ಯಾರ್ಥಿನಿಯರ ಜೊತೆ ನಡೆಸಲಾಯಿತು.

ಈ ಸಭಾ ಕಾರ್ಯಕ್ರಮದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್. ಕೃಷ್ಣಮೂರ್ತಿ, ಎಸ್‌ಡಿಎಂಸಿ ಅಧ್ಯಕ್ಷ ಗುರುರಾಜ್ ಆರ್, ರಾಮಕೃಷ್ಣ ಶಾಲೆಯ ವ್ಯವಸ್ಥಾಪಕ ದೇವರಾಜ್, ಪರಿಸರ ಪ್ರೇಮಿ ಎಸ್.ಹೆಚ್. ನಿಂಗಮೂರ್ತಿ, ಕಸಾಪ ತಾಲ್ಲೂಕು ಅಧ್ಯಕ್ಷರಾದ ತ.ಮ.ನರಸಿಂಹ, ಚಂದ್ರಶೇಖರ ಶೆಟ್, ಶಿಕ್ಷಕರು ಸಾಹಿತಿಗಳಾದ ತಿರುಪತಿನಾಯ್ಕ್, ಶಿಕ್ಷಕರ ಸಮಗದ ಅಧ್ಯಕ್ಷ ಹೆಚ್.ಆರ್. ಸುರೇಶ್, ನೌಕರರ ಸಮಗದ ಅಧ್ಯಕ್ಷ ಬಸವಣ್ಯಪ್ಪ, ಕನ್ನಡ ಸಾಹಿತ್ಯ ಸಾಂಸ್ಕೃತೀಕ ವೇದಿಕೆಯ ನಗರ ರಾಘವೇಂದ್ರ, ಪತ್ರಕರ್ತರ ಸಂಘದ ಅಧ್ಯಕ್ಷ ವೆಂಕಟೇಶ್‌ಮೂರ್ತಿ, ಮಾವಿನಕೊಪ್ಪ ಶಾಲೆಯ ಮುಖ್ಯ ಶಿಕ್ಷಕ ಕುಬೇಂದ್ರಪ್ಪ, ಡಾ|| ಅಂಜಲಿ, ಅಶ್ವಿನಿ ಸುಧೀಂದ್ರ ಪಂಡಿತ್, ಗೌತಮ್ ಕುಮಾರಸ್ವಾಮಿ, ಹೆಚ್.ಆರ್ ಪ್ರಕಾಶ್, ಪರಮೆಶ್ವರಪ್ಪ, ಕರಿಬಸಪ್ಪ, ಕೆ.ಇ.ಬಿ ಪ್ರಶಾಂತ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!