ಪತ್ನಿ ಸಾವಿನಿಂದ ಮನನೊಂದು ಪತಿ ನೇಣಿಗೆ ಶರಣು !

0 1,436

ಹೊಸನಗರ : ಪಟ್ಟಣದ ಮಾವಿನಕೊಪ್ಪ ನಿವಾಸಿ ಎಸ್ ಎಂ ವಿಶ್ವನಾಥ (67) ಗುರುವಾರ ಸಂಜೆ ಸುಮಾರು 7:30ರ ಸುಮಾರಿಗೆ ತಮ್ಮ ಮನೆಯಲ್ಲಿ ಫ್ಯಾನ್ ಕೊಂಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ವಿಶ್ವನಾಥರ ಪತ್ನಿ ಲೀಲಾವತಿಯವರು ಕಳೆದ ಆರು ತಿಂಗಳ ಹಿಂದೆ ಅಕಾಲ ಮರಣ ಹೊಂದಿದ್ದು ಪತ್ನಿಯ ಮರಣ ನಂತರ ವಿಶ್ವನಾಥ್ ರವರು ಪತ್ನಿಯ ಕೊರಗಿನಲ್ಲಿ ದಿನ ದೂಡುತ್ತಿದ್ದರೆಂದು ತಿಳಿದುಬಂದಿದೆ.

ವಿಶ್ವನಾಥ್ ರವರ ಪುತ್ರ ಬಸ್ ಏಜೆಂಟ್ ರಾಘವೇಂದ್ರ ಸಂಜೆ ತನ್ನ ತಂದೆಗೆ ಕಾಫಿ ಮಾಡಿ ಕೊಟ್ಟು ಬಸ್ ಬುಕ್ ಮಾಡಲು ಬಸ್ ನಿಲ್ದಾಣಕ್ಕೆ ತೆರಳಿದ್ದು ರಾತ್ರಿ 9:30ರ ನಂತರ ಮನೆಗೆ ತೆರಳಿದಾಗ ತಂದೆ ನೇಣಿಗೆ ಶರಣಾಗಿದ್ದು ಕಂಡುಬಂದಿದೆ.

ಮೃತ ವಿಶ್ವನಾಥ್ಕೆಎಸ್ಆರ್ಟಿಸಿ ಬಸ್‌ನಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.

ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!