ಫೆ.29 ರಿಂದ ಮಾ. 7ರ ವರೆಗೆ ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವರ ಪುನಃಪ್ರತಿಷ್ಠೆ, ಬ್ರಹ್ಮಕಲಶ, ಬ್ರಹ್ಮರಥೋತ್ಸವ

0 536

ಹೊಸನಗರ: ತಾಲ್ಲೂಕಿನ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಒಂದಾಗಿರುವ ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆವರಣದಲ್ಲಿ ಫೆ. 29ರ ಗುರುವಾರದಿಂದ ಮಾ. 7ರ ಗುರುವಾರದವರೆಗೆ ಶ್ರೀ ಸಿದ್ದಿ ವಿನಾಯಕ ದೇವರ ಪುನಃ ಪ್ರತಿಷ್ಠೆ, ಬ್ರಹ್ಮಕಲಶ, ಬ್ರಹ್ಮರಥೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ಹೆಚ್ ಪ್ರಬಾಕರ್‌ ತಿಳಿಸಿದ್ದಾರೆ.

ಮಾರ್ಚ್ 4ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಜೀವಕುಂಭಾಭಿಷೇಕ ಪೂರ್ವಕ ಶ್ರೀ ದೇವರ ಪ್ರತಿಷ್ಠೆ, ಶಿಖರ ಪ್ರತಿಷ್ಠೆ, ಮಾರ್ಚ್ 5ರ ಮಂಗಳವಾರ 1009 ಕಲಶ ಮಂಡಲ ಅಧಿವಾಸ ಬ್ರಹ್ಮಕಲಶ ಸ್ಥಾಪನೆ, ಅಧಿವಾಸ ಹವನ ಮೂಲಮಂತ್ರ ಹವನ, ಮಾರ್ಚ್ 6ರ ಬುಧವಾರ ಬೆಳಿಗ್ಗೆ 1009 ಬ್ರಹ್ಮಕಲಶಾಭೀಷೇಕ, ಕಲಾವಾಹನೆ, ಮಹಾಪೂಜೆ, ಪ್ರತಿಷ್ಠಾಂಗ ಬ್ರಹ್ಮರಥೋತ್ಸವ ರಥಬೀದಿ ಉತ್ಸವ, ಮಾರ್ಚ್ 7ರ ಗುರುವಾರ ಮಹಾಪೂಣಾಹುತಿ, ಅಂಕುರಾರ್ಪಣೆ, ವಾರಣ ಹವನ ಯಾತ್ರ ಅವಬೃಥ ತೀರ್ಥೋತ್ಸವ ವಿಪ್ರಾಶೀರ್ವಾದ ಅಂಕುರ ಪ್ರಸಾದ ವಿತರಣೆ ಕಾರ್ಯಕ್ರಮಗಳಿರುತ್ತದೆ.

ಈ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಎನ್.ಡಿ ನಾಗೇಂದ್ರರಾವ್, ಮುಜರಾಯಿ ಇಲಾಖೆಯ ತಹಶೀಲ್ದಾರ್ ರಶ್ಮಿ ಹೆಚ್.ಜಿ, ಬೆಂಗಳೂರಿನ ನ್ಯಾಯಾವಾದಿಗಳು ದೇವಸ್ಥಾನಕ್ಕೆ ಅಪಾರ ಕೊಡುಗೆ ನೀಡಿದ ದಾನಿಯಾದ ಎಸ್ ಗಂಗಾಧರ ಐತಾಳ್, ಅಧ್ಯಕ್ಷರಾದ ವಾಸುದೇವ ಉಡುಪ ಇನ್ನೂ ಮುಂತಾದವರು ಉಪಸ್ಥಿತರಿದ್ದು ಈ ದೇವತಾ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಈ ಮೂಲಕ ಕೇಳಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!