ಶಿವರಾತ್ರಿ ಪ್ರಯುಕ್ತ ದೇವರ ಅಭಿಷೇಕಕ್ಕೆ ಗಂಗಾಜಲ ವಿತರಣೆ

0 254

ಹೊಸನಗರ: ಮಾಜಿ ಸಚಿವ ಮಾಳೂರು ಕೃಷ್ಣಯ್ಯಶೆಟ್ಟಿ ಶಿವರಾತ್ರಿ ಪ್ರಯುಕ್ತ ರಾಜ್ಯದ ವಿವಿಧ ಶಿವಾಲಯಗಳಿಗೆ ದೇವರ ಅಭಿಷೇಕಕ್ಕಾಗಿ ಕೊಡುಗೆಯಾಗಿ ನೀಡಿದ ಪವಿತ್ರ ಗಂಗಾ ಜಲವನ್ನು ತಾಲೂಕು ಆಡಳಿತದ ವತಿಯಿಂದ ಹೊಸನಗರ ತಾಲೂಕಿನ ವಿವಿಧ ಶಿವಾಲಯಕ್ಕೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕಸಬಾ ಕಂದಾಯ ನಿರೀಕ್ಷಕ ರೇಣುಕೇಶ್, ಮುಂಬಾರು ಗ್ರಾಮ ಆಡಳಿತ ಅಧಿಕಾರಿ ನವೀನ್ ಆರಾಧ್ಯ, ಮುಜರಾಯಿ ಪ್ರಥಮ ದರ್ಜೆ ಸಹಾಯಕಿ ವಿಭಾಗದ ಶಿಲ್ಪ, ಗ್ರಾಮ ಸಹಾಯಕರ ಸಂಘದ ತಾಲೂಕು ಅಧ್ಯಕ್ಷ ಬಾಳೆಕೊಪ್ಪ ಗಣೇಶ್ ಜಯನಗರ ಗೋಪಿನಾಥ್, ನಕ್ಷತ್ರ ಮಂಜುನಾಥ್, ಬಾಳೆಕೊಪ್ಪ ನಾಗಪ್ಪ ಸೇರಿದಂತೆ ವಿವಿಧ ದೇವಾಲಯಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!