ಶ್ರೀಗಂಧ ಹಾಗೂ ಬೀಟೆ ಉತ್ಪನ್ನ ಅಕ್ರಮ ದಾಸ್ತಾನು ; ಓರ್ವನ ಬಂಧನ

0 120

ಶಿವಮೊಗ್ಗ : ಉಂಬಳೇಬೈಲು ವಲಯ ವ್ಯಾಪ್ತಿಯ ಶಿವಮೊಗ್ಗ ನಗರದ ಸುಳೇಬೈಲು ಶಾಂತಿನಗರ ವಾಸಿಯಾದ ಬಾಬಾಜಾನ್ ಬಿನ್ ಮೌಲಾಸಾಬ್ ರವರ ಮನೆಯಲ್ಲಿ ಅಕ್ರಮವಾಗಿ ಶ್ರೀಗಂಧ ಹಾಗೂ ಬೀಟೆ ಉತ್ಪನ್ನ ದಾಸ್ತಾನು ಇದ್ದ ಕಾರಣ ಈತನ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ ಹಾಗೂ ನಿಯಮಾವಳಿಗಳಂತೆ ಅರಣ್ಯ ಮೊಕದ್ದಮೆ ದಾಖಲಿಸಿ ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಭದ್ರಾವತಿ ಡಿಸಿಎಫ್ ಆಶಿಶ್ ರೆಡ್ಡಿ ಹಾಗೂ ಎಸಿಎಫ್ ಆರ್. ಡಿ. ಪುಟ್ನಳ್ಳಿ ಮಾರ್ಗದರ್ಶನದಲ್ಲಿ ಉಂಬಳೇಬೈಲು ಆರ್.ಎಫ್.ಒ ತೇಜ್ ವೈ. ಪಿ., ಡಿವೈಆರ್ಎಫ್ಒ ನವೀನ ಹೂಗಾರ, ಡಿವೈಆರ್ಎಫ್ಒ ಗಿಡ್ಡಸ್ವಾಮಿ ಹಾಗೂ ಗಸ್ತು ವನ ಪಾಲಕರಾದ ರಿಯಾಜ್ ಅಹ್ಮದ್ ಬಾಗವಾನ್, ಮಾಲತೇಶ್ ಸೂರ್ಯವಂಶಿ, ಸುನಿಲ್ ಸಾಸಲವಾಡ, ಶ್ರೀಕಾಂತ್ ಹಾಗೂ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!