ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಮೋತ್ಸವಕ್ಕೆ ಅದ್ಧೂರಿ ಚಾಲನೆ
ಹೊಸನಗರ ಶ್ರೀ ಗಂಗಾಧರೇಶ್ವರ ದೇವಸ್ಥಾನದಿಂದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳಿಂದ ಪುರ ಪ್ರವೇಶ ಮಾಡುವ ಮೂಲಕ ಅದ್ದೂರಿಯ ಚಾಲನೆ…..
ಹೊಸನಗರ : ಶ್ರೀರಾಮಚಂದ್ರಪುರ ಮಠದ ಅದ್ದೂರಿಯ ಶ್ರೀ ರಾಮೋತ್ಸವಕ್ಕೆ ಇಂದು ಪರಮ ಪೂಜ್ಯ ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳವರು ಪಟ್ಟಣದ ಶ್ರೀ ಗಂಗಾಧರೇಶ್ವರ ದೇವಸ್ಥಾನದಿಂದ ತೆರೆದ ಅಲಂಕೃತ ವಾಹನದಲ್ಲಿ ಪೂರ್ಣಕುಂಭದೊಡನೆ ಪುರಪ್ರವೇಶ ಮಾಡುವ ಮೂಲಕ ಅದ್ದೂರಿಯ ಚಾಲನೆ ನೀಡಲಾಯಿತು.
ಮಾವಿನಕೊಪ್ಪದಿಂದ ನೆಹರು ರಸ್ತೆ ಶಿವಪ್ಪನಾಯಕ ರಸ್ತೆ ಮೂಲಕ ಶ್ರೀ ವೀರಾಂಜನೇಯ ದೇವಸ್ಥಾನಕ್ಕೆ ತೆರಳಿದ ಶ್ರೀಗಳವರು ತೆರಳಿದರು.
ಶ್ರೀಗಳವರು ತೆರಳುವ ಮಾರ್ಗದಲ್ಲಿ ಭಕ್ತವೃಂದದವರು ತಳಿರು-ತೋರಣ ಕಟ್ಟಿ ಹೆಂಗಳೆಯರು ಮನೆ ಎದುರು ನೀರು ಹಾಕಿ ಸಗಣಿಯಿಂದ ಸಾರಿಸಿ ರಂಗೋಲಿ ಬಿಡಿಸಿ ಅಲಂಕೃತಗೊಳಿಸಿದ್ದರು.
ಶ್ರೀ ವೀರಾಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಂದ ಶ್ರೀಗಳು ಶ್ರೀಮಠಕ್ಕೆ ತೆರಳಿದರು.