ಹೊಸನಗರ ಪ.ಪಂ.ಗೆ ಸರ್ಕಾರದ ನಾಮನಿರ್ದೇಶಕ ಸದಸ್ಯರಾಗಿ ಗುರುರಾಜ್, ನಿತ್ಯಾನಂದ ಹಾಗೂ ನೇತ್ರಾ ನೇಮಕ
ಹೊಸನಗರ: ಇಲ್ಲಿನ ಪಟ್ಟಣ ಪಂಚಾಯತಿಗೆ ಕಾಂಗ್ರೆಸ್ ಪಕ್ಷದ ಸರ್ಕಾರದ ನಾಮನಿರ್ದೇಶಕ ಸದಸ್ಯರಾಗಿ ಕಾಂಗ್ರೆಸ್ ಪಕ್ಷದ ಟೌನ್ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಕೆ.ಎಸ್. ಗುರುರಾಜ್, ಜೆ.ಸಿ.ಎಂ ರಸ್ತೆಯ ಕಾಂಗ್ರೆಸ್ ಪಕ್ಷಕ್ಕಾಗಿ ಸೇವೆ ಸಲ್ಲಿಸುತ್ತಿರುವ ಹೆಚ್.ಎಂ.ನಿತ್ಯಾನಂದ ಹಾಗೂ ಸಮಾಜ ಸೇವೆಯಲ್ಲಿ ಸಾಕಷ್ಟು ಸೇವೆ ಸಲ್ಲಿಸುತ್ತಿರುವ ನೇತ್ರಾ ಸುಬ್ರಾಯಭಟ್ರವರನ್ನು ಸರ್ಕಾರ ನೇಮಿಸಿ ಆದೇಶಿಸಿದೆ.
ಅಭಿನಂದನೆ:
ಇವರ ಆಯ್ಕೆಯನ್ನು ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಚಂದ್ರಮೌಳಿ, ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿಯವರು ಅಭಿನಂದಿಸಿದ್ದಾರೆ.