Shivamogga News | ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಸಮಾಜದ ಅಸ್ತಿತ್ವಕ್ಕೆ ಕುಂದು ಉಂಟಾದಾಗ ಸಿಡಿದೇಳುವವನೇ ನಿಜವಾದ ವೀರಭದ್ರ

0 125

ಶಿವಮೊಗ್ಗ : ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಸಮಾಜದ ಅಸ್ತಿತ್ವಕ್ಕೆ ಕುಂದು ಉಂಟಾದಾಗ ಸಿಡಿದೇಳುವವನೇ ನಿಜವಾದ ವೀರಭದ್ರ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದ್ದಾರೆ.

ಅವರು ಇಂದು ನಗರದ ಚೌಕಿ ಮಠ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಶಿವಮೊಗ್ಗದ ವತಿಯಿಂದ  ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ 2023 ಅಂಗವಾಗಿ ಸಂಗೀತಯುಕ್ತ ಇಷ್ಟಲಿಂಗ ಪೂಜೆ ಬಳಿಕ ಧರ್ಮಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ವೀರಭದ್ರ ಉಗ್ರ ಸ್ವರೂಪದ ಪ್ರತಿಕ. ತನ್ನ ಮಗಳಿಗೆ ಅವಮಾನ ಮಾಡಿದ ದಕ್ಷಬ್ರಹ್ಮನ ತಲೆ ಕಡೆದು ಯಜ್ಞಕ್ಕೆ ಹಾಕಿದವನು. ಶಿವನ ಜಟೆ ಇಂದ ಉದ್ಭವಿಸಿದವನು. ಸ್ವಾಭಿಮಾನದ ಪ್ರತೀಕ. ಸಮಾಜದ ಆತ್ಮಭಿಮಾನಕ್ಕೆ ಮತ್ತು ಪರಂಪರೆಗೆ ಹಲವಾರು ಘಟನೆಗಳು ಧಕ್ಕೆ ತಂದಿದೆ. ಆಗ ಸಮಾಜ ಬಾಂಧವರು ಜಾಗೃತರಾದಾಗ ಮಾತ್ರ ವೀರಭದ್ರನ ನಿಜಭಕ್ತರಾದಾಗ ಮಾತ್ರ ಈ ಜಯಂತಿ ಉತ್ಸವ ಸಾರ್ಥಕವಾಗುತ್ತದೆ ಎಂದರು.

ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಕಂಕನವಾಡಿ ಮಾತನಾಡಿ ವೀರಶೈವ ಸಮಾಜ ಒಗ್ಗಟ್ಟಾಗಬೇಕೆಂಬ ಏಕೈಕ ಉದ್ದೇಶದಿಂದ ಈ ಜಯಂತ್ಯೋತ್ಸವ ಪ್ರಾರಂಭವಾಯಿತು. ರಾಜ್ಯದಲ್ಲಿ ಲಿಂಗಾಯತ ಮತ್ತು ವೀರಶೈವ ರೆಂಬ ಭಿನ್ನಮತ ತರಲು ಕೆಲವು ಶಕ್ತಿಗಳು ಯತ್ನಿಸಿದಾಗ ಈ ಜಯಂತಿ ಮೂಲಕ ಸಮಾಜವನ್ನು ಒಗ್ಗೂಡಿಸುವ ಯತ್ನ ಮಾಡಿದ್ದೇವೆ ಸಾವಿರಾರು ಗ್ರಾಮಗಳಲ್ಲಿ ಜಯಂತ್ಯೋತ್ಸವ ನಡೆದಿದೆ. ಕೇದಾರ ಜಗದ್ಗುರುಗಳ ಸನ್ನಿಧಾನದಲ್ಲಿ ಈ ಕಾರ್ಯಕ್ರಮ ಅಬೂತಪೂರ್ವಾಗಿ ನಡೆಯುತ್ತಿದೆ ಎಂದರು.

ಶಿಕಾರಿಪುರ ಶಾಸಕ ವಿಜಯೇಂದ್ರ ಮಾತನಾಡಿ ವು ಹೂ ತೋಟದ ಮಕರಂದ ಹೀರಲು ಬರುವ ದುಂಬಿಗಳಂತೆ ಸಮಾಜ ಈ ಕಾರ್ಯಕ್ರಮಕ್ಕೆ ಒಗ್ಗಟ್ಟಾಗಿ ಶ್ರೀಗಳ ಆಶೀರ್ವಚನ ಕೇಳಲು ಬಂದಿದೆ. ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೇ ನಮ್ಮೆಲ್ಲರ ಸೌಭಾಗ್ಯ ಎಂದರು. ನಾಡನ್ನು ಸರಿ ದಿಕ್ಕಿನಲ್ಲಿ ತರಲು ಇಂತಹ ಧರ್ಮಸಭೆಗಳ ಅವಶ್ಯಕತೆ ಇದೆ. 

ಸ್ವಾಭಿಮಾನ ಎತ್ತು ಹಿಡಿದು ಅವಮಾನ ಮೆಟ್ಟಿ ನಿಲ್ಲಲು ವೀರಭದ್ರೇಶ್ವರ ಜಯಂತಿ ಆಚರಣೆ ಅಗತ್ಯ. ವೀರಶೈವರು ಸಮಾನತೆಯ ಸಂದೇಶವನ್ನು ಸಾರಿ ಎಲ್ಲಾ ಸಮಾಜದ ನಾಯಕತ್ವವನ್ನು ತೆಗೆದುಕೊಂಡು ಒಟ್ಟಾಗಿ ಕೊಂಡೊಯ್ಯುವಂತಹ ಸಮಾಜ ಇದು. ಆಧುನಿಕ ತಂತ್ರಜ್ಞಾನದ ಪ್ರಭಾವದಿಂದ ಸಂಬಂಧಗಳನ್ನು ಕಡಿದುಕೊಳ್ಳುವಂತಹ ಈ ಸಂದರ್ಭದಲ್ಲಿ ಬೆಸೆಯುವ ಕೆಲಸವನ್ನು ಈ ಸಭೆ ಮಾಡುತ್ತಿದೆ ಎಂದರು ಸಮಾಜದ ಅಸ್ತಿತ್ವ ಸಿಟಿಲವಾಗುತ್ತಿದೆ ಸಮಾಜದಲ್ಲಿ ಒಡಕನ್ನು ತರುವ ಕೆಲಸವನ್ನು ದುಷ್ಟ ಶಕ್ತಿಗಳು ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮ ಸಮಾಜನಾಯಕತ್ವ ವಹಿಸುವ ಅನಿವಾರ್ಯತೆ ಇದೆ ಎಂದರು.

ಶಾಸಕ ಚನ್ನಬಸಪ್ಪ ಮಾತನಾಡಿ ಹಾವೇರಿಯಲ್ಲಿ ನೂರಕ್ಕೂ ಹೆಚ್ಚು ವೀರಶೈವ ಕುಟುಂಬಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದೆ. ಎಲ್ಲಾ ಮೂಲೆ ಮೂಲೆಗೂ ಕ್ರಿಶ್ಚನ್ ಧರ್ಮ ತಲುಪುತ್ತಿರುವ ಈ ಸಂದರ್ಭದಲ್ಲಿ ವೀರಶೈವರು ಜಾಗರೂಕರಾಗಿ ಶ್ರೀಗಳ ನೇತೃತ್ವದಲ್ಲಿ ನಮ್ಮ ಸಮಾಜವನ್ನು ಬಿಟ್ಟು ಹೋದವರನ್ನು ಮರಳಿ ತರುವ ಕೆಲಸ ಆಗಬೇಕಾಗಿದೆ ಎಂದರು. ಜಗಳೂರು ಶ್ರೀಗಳು ಮಾತನಾಡಿ ವಿಶ್ವಕ್ಕೆ ಭಾರತ ಗುರುವಾಗಿದೆ ಇದಕ್ಕೆ ಕಾರಣ ಇಲ್ಲಿನ ಸಂಸ್ಕಾರ ಸಂಸ್ಕೃತಿ ಮತ್ತು ಆಧ್ಯಾತ್ಮ ಪರಂಪರೆ. ಸುವರ್ಣ ಅಕ್ಷರದಲ್ಲಿ ಬರೆದಿಡುವ ಕಾರ್ಯಕ್ರಮವಿದು ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಕೇದಾರನಾಥ ಉಮಾಶಂಕರ ಲಿಂಗ ಶಿವಾಚಾರ್ಯ ಭಗವದ್ಪಾದರು ಕೇದಾರ ಪೀಠ ಇವರು ವಹಿಸಿದ್ದರು ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಬಿಳಿಕೆ ಮಠ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಸಂಸದ ಬಿ ವೈ ರಾಘವೇಂದ್ರ. ಎಚ್.ಎಮ್ ಚಂದ್ರಶೇಖರಪ್ಪ. ಎನ್ ಜೆ ರಾಜಶೇಖರ್ ಎಸ್ಪಿ ದಿನೇಶ್ ಎಚ್ ಸಿ ಯೋಗೇಶ್ ಅನಿತಾ ರವಿಶಂಕರ್, ಈ ವಿಶ್ವಾಸ್ ಜ್ಞಾನೇಶ್ವರಪ್ಪ ಮಹೇಶ್ವರಪ್ಪ ರುದ್ರಣ್ಣ, ಎನ್ ಮಂಜುನಾಥ್ ರುದ್ರಮುನಿ ಎನ್ ಸಜ್ಜನ್ ಇದ್ದರು. ಅಧ್ಯಕ್ಷತೆಯನ್ನು ಬಿ ಶಿವರಾಜ್ ವಹಿಸಿದ್ದರು. ಪ್ರಾಸ್ತಾವಿಕ ನುಡಿ ಎಸ್.ಎ ಜ್ಯೋತಿಪ್ರಕಾಶ್, ಕಾರ್ಯಕ್ರಮದ ಉಸ್ತುವಾರಿ ಡಾ. ಧನಂಜಯ್ ಸರ್ಜಿ ವಹಿಸಿದ್ದರು.

Leave A Reply

Your email address will not be published.

error: Content is protected !!