ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ಉರುಳಿದ ಕಾರು !

0 40

ತೀರ್ಥಹಳ್ಳಿ : ಕಾರೊಂದು ಪಲ್ಟಿಯಾಗಿ ತೋಟಕ್ಕೆ ಬಿದ್ದು ಮೂವರಿಗೆ ಗಾಯವಾದ ಘಟನೆ ಸೋಮವಾರ ನೆಡೆದಿದೆ.

ತಾಲೂಕಿನ ಆಗುಂಬೆ ಸಮೀಪದ ಕಲ್ಮನೆ ಬಳಿ ಕಾರ್ಕಳದಿಂದ ಶಿವಮೊಗ್ಗ ಕಡೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ತರೀಕೆರೆ ಮೂಲದವರು ತಮ್ಮ ಮಗನನ್ನು ಕಾರ್ಕಳಕ್ಕೆ ಬಿಟ್ಟು ವಾಪಾಸ್ ಆಗುತ್ತಿದ್ದರು. ಅತೀ ವೇಗದ ಚಾಲನೆಯಿಂದ ಈ ಅಪಘಾತ ನಡೆದಿರುವುದಾಗಿ ತಿಳಿದುಬಂದಿದೆ.

ಕಾರಿನ ಗ್ಲಾಸ್ ಒಡೆದು ಮೂವರನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ಮೂವರಿಗೂ ಪೆಟ್ಟಾಗಿದ್ದು ಶಿವಮೊಗ್ಗಕ್ಕೆ ಕರೆದಯ್ಯಲಾಗಿದೆ. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave A Reply

Your email address will not be published.

error: Content is protected !!