ಊಟ ಬಡಿಸದಕ್ಕೆ ಕೋಪಗೊಂಡು ಪತ್ನಿಯನ್ನೇ ಹತ್ಯೆಗೈದ ಪತಿ !

Written by Mahesha Hindlemane

Published on:

SHIKARIPURA ; ಊಟ ಬಡಿಸದಕ್ಕೆ ಕೋಪಗೊಂಡ ಪತಿ ಪತ್ನಿಯ ಕುತ್ತಿಗೆಗೆ ಟವೆಲ್ ಬಿಗಿದು ಕೊಲೆಗೈದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಬ್ಲಿಗೊಳ ಗ್ರಾಮದಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಗೌರಮ್ಮ (29) ಕೊಲೆಯಾದ ದುರ್ಧೈವಿ. ಗೌರಮ್ಮ ಗಾರ್ಮೆಂಟ್ಸ್ ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಗಂಡ ಮನೋಜ್ (30) ಜೊತೆ ಜಗಳವಾಗಿದ್ದು, ಈ ವೇಳೆ ಮನೋಜ್ ಪತ್ನಿಯ ಕುತ್ತಿಗೆಗೆ ಟವೆಲ್ ಬಿಗಿದು ಹತ್ಯೆ ಮಾಡಿದ್ದಾನೆ ಎಂದು ಗೌರಮ್ಮ ತಂದೆ ಗುತ್ಯಪ್ಪ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಹೇಗಾಯ್ತು ಘಟನೆ ?

ಇಂದು ಸಂಜೆ ಆರೋಪಿ ಮನೋಜ್ ತನ್ನ ಪತ್ನಿ ಗೌರಮ್ಮಗೆ ಊಟ ಬಡಿಸಿಕೊಡುವಂತೆ ತಿಳಿಸಿದ್ದ. ಈ ವೇಳೆ ಗೌರಮ್ಮ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರಿಂದ, ಪತಿಗೆ ತಾನೇ ಬಡಿಸಿಕೊಳ್ಳುವಂತೆ ತಿಳಿಸಿದ್ದಳು. ಇದರಿಂದ ಕೋಪಗೊಂಡ ಮನೋಜ್ ಗೌರಮ್ಮಳ ಮೇಲೆ ಹಲ್ಲೆ ನಡೆಸಿ ಟವಲ್‌ನಿಂದ ಕುತ್ತಿಗೆ ಬಿಗಿದು, ಕೊಲೆ ಮಾಡಿರುವುದು ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Leave a Comment