ರೈತ ಮುಖಂಡ ಟೈಲರ್ ಮಂಜಪ್ಪ ನಿಧನ

0 41

ರಿಪ್ಪನ್‌ಪೇಟೆ: ರೈತ ಮುಖಂಡ, ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಆರ್.ಎನ್.ಮಂಜಪ್ಪ (89) ತಮ್ಮ ಸ್ವಗೃಹದಲ್ಲಿ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಮೃತ ಮಂಜಪ್ಪನವರು ಟೈಲರ್ ವೃತ್ತಿಯೊಂದಿಗೆ ಕರ್ನಾಟಕ ಪ್ರಾಂತೀಯ ಹಿಂದು ರಾಷ್ಟ್ರಸೇನಾ ಸೇವಾ ಸಮಿತಿಯ ಅಧ್ಯಕ್ಷರಾಗಿ, ತಾಲ್ಲೂಕು ರೈತ ಸಂಘದ ಮುಖಂಡರಾಗಿದ್ದು ಬಸ್‌ ನಿಲ್ದಾಣಕ್ಕಾಗಿ ಹೋರಾಟ ನಡೆಸಿದವರು ಇವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತರಿಗೆ ನಾಲ್ವರು ಪುತ್ರರಿದ್ದಾರೆ.

ಸಂತಾಪ:
ಶಾಸಕ ಗೋಪಾಲಕೃಷ್ಣ ಬೇಳೂರು,‌ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಆರ್.ಎನ್.ಮಂಜಪ್ಪನವರ ನಿಧನಕ್ಕೆ ರೈತ ಸಂಘದ ಅಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ದಿ.ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಟ್ರಸ್ಟಿ ಕಲ್ಲೂರು ಮೇಘರಾಜ್,
ಕೋಣಂದೂರು ಲಿಂಗಪ್ಪ, ರೈತ ಮುಖಂಡ ಈಶ್ವರಪ್ಪ ಕುಕ್ಕಳಲೇ, ಸುಗಂಧರಾಜ್‌ ಕಲ್ಮಕ್ಕಿ, ಹಿಂದು ಮಹಾಸಭಾ ಸೇವಾ ಸಮತಿಯ ಗೌರವಾಧ್ಯಕ್ಷ ವೈ.ಜೆ.ಕೃಷ್ಣ, ಎಂ.ಬಿ.ಲಕ್ಷ್ಮಣ ಗೌಡ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

Leave A Reply

Your email address will not be published.

error: Content is protected !!