ಸಾವಿನಲ್ಲೂ ಒಂದಾದ ಕುಚಿಕುಗಳು !

0 57

ಶಿಕಾರಿಪುರ : ಸ್ನೇಹಿತನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಶಿಕಾರಿಪುರ-ಶಿರಾಳಕೊಪ್ಪ ನಡುವಿನ ಕೆಎಸ್ಆರ್ಟಿಸಿ ಡಿಪೋ ಬಳಿ ನಡೆದಿದೆ.

ಶನಿವಾರ ರಾತ್ರಿ ಬೈಕ್ ಅಪಘಾತದಲ್ಲಿ ಸವಾರ ಆನಂದ (30) ಮೃತಪಟ್ಟಿದ್ದ. ಈ ವಿಷಯ ಕೇಳುತ್ತಿದ್ದಂತೆ ಆತನ ಸ್ನೇಹಿತ ಸಾಗರ (22) ಎಂಬಾತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಈ ಇಬ್ಬರು ಗೆಳೆಯರು ಶಿಕಾರಿಪುರ ತಾಲೂಕಿನ ಪುಣೇದಹಳ್ಳಿ ನಿವಾಸಿಗಳು.

ಇನ್ನು ಆನಂದನ ಜೊತೆ ಬೈಕ್ ನಲ್ಲಿ ನಿನ್ನೆ ರಾತ್ರಿ ತೆರಳುತ್ತಿದ್ದ ಸವಾರ ನಟರಾಜ್ ಸ್ಥಿತಿ ಗಂಭೀರವಾಗಿದೆ. ಜೊತೆಗೆ ಇದೇ ವೇಳೆ ಮತ್ತೊಂದು ಬೈಕ್ ನಲ್ಲಿದ್ದ ಜಾವಿದ್, ಮಲಿಕ್ ಎಂಬುವರಿಗೂ ಕೂಡ ಗಂಭೀರ ಗಾಯಗೊಂಡಿದ್ದರು. ಕೂಡಲೇ ಮೂವರು ಗಾಯಾಳುಗಳಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!