ಗಾಂಜಾ ಮಾರುತ್ತಿದ್ದವರ ಬಂಧನ !
ಸಾಗರ : ನಗರದಲ್ಲಿ ಗಾಂಜಾ ಮಾರುತ್ತಿದ್ದವರ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದೆ.
ನಗರದ ವರದಹಳ್ಳಿ ಕ್ರಾಸ್ ಬಳಿಯಲ್ಲಿ ಇಂದು ಗಾಂಜಾ ಮಾರುತ್ತಿದ್ದ ಖಚಿತ ಮಾಹಿತಿ ಮಂಗಳೂರು ವಿಭಾಗದ ಜಂಟಿ ಆಯುಕ್ತರಿಗೆ ಸಿಕ್ಕಿತ್ತು. ಈ ಮಾಹಿತಿಯನ್ನು ಸಾಗರ ಅಬಕಾರಿ ಉಪ ನಿರೀಕ್ಷಕರಾದಂತ ಸಂತೋಷ್ ನಡೇರ್ ಗೆ ನೀಡಿದ್ದಾರೆ.
ಈ ಮಾಹಿತಿ ಸಿಕ್ಕ ತಕ್ಷಣ ಅಲರ್ಟ್ ಆದಂತ ಅವರು, ಕೂಡಲೇ ಇಂದು ಬೆಳಿಗ್ಗೆ 11 ಗಂಟೆಗೆ ಸಾಗರ ನಗರದ ಸೌಪರ್ಣಿಕ ಹೋಟೆಲ್ ಹತ್ತಿರ ವರದಹಳ್ಳಿ ಕ್ರಾಸ್ ಬಳಿಗೆ ತೆರಳಿ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಗಾಂಜಾ ಮಾರುತ್ತಿದ್ದಂತ ಆರೋಪಿ ಮಹಮ್ಮದ್ ಹುಸೇನ್ ಬಿನ್ ಮೆಹಬೂಬ ಸುಭಾನ, ರಾಮನಗರ ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮಹಮ್ಮದ್ ಹುಸೇನ್ ಬಳಿಯಲ್ಲಿ 53 ಗ್ರಾಂ ಒಣ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಆರೋಪಿಯ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ದಾಳಿಯಲ್ಲಿ ಅಬಕಾರಿ ನಿರೀಕ್ಷಕ ಸಂದೀಪ್ ಎಲ್.ಸಿ., ಉಪನಿರೀಕ್ಷಕ ಸಂತೋಷ್ ರಡ್ಡೇರ್, ವಿನ್ನಿ ಲೋಬೋ, ಸಿಬ್ಬಂದಿಗಳಾದ ಗುರುಮೂರ್ತಿ, ಅರುಣ್ ಜಿ.ಎಂ., ದೀಪಕ್ ಯು.ಪಿ., ಕನ್ನಯ್ಯ, ಮಹಾಬಲೇಶ್, ವಾಹನ ಚಾಲಕ ಗಣಪತಿ ಪಾಲ್ಗೊಂಡಿದ್ದರು.