ಬೈಕ್’ನಲ್ಲಿ ತೆರಳುತ್ತಿದ್ದ ಯುವಕ ದಿಢೀರ್ ಎಂದು ಕಾಡಿಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಗೊತ್ತಾ ? ಡೆತ್ನೋಟ್ ಬಿಚ್ಚಿಟ್ಟ ರಹಸ್ಯ | Suicide | Shivamogga | Sagara | Forest
ಸಾಗರ : ಬೈಕ್ ನಲ್ಲಿ ತೆರಳುತ್ತಿದ್ದ ಯುವಕನೋರ್ವ ದಿಢೀರ್ ಎಂದು ಕಾಡಿಗೆ ಹೋಗಿ ನೇಣು ಬಿಗಿದುಕೊಂಡ ಘಟನೆ ಸಾಗರದಲ್ಲಿ ನಿನ್ನೆ ನಡೆದಿದೆ.
ನೇಣು ಬಿಗಿದ ಜಾಗದಲ್ಲಿ ಬೈಕ್ ಅನಾಥವಾಗಿ ಪತ್ತೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಯುವಕ ಸಾಗರದ ಉಳ್ಳೂರು ಜೋಗಿನಗದ್ದೆ ಬಳಿ ಬೈಕ್ ನಲ್ಲಿ ತೆರಳುವಾಗ ಜೋಗಿನಗದ್ದೆಯ ಬಳಿ ಕಾಡಿಗೆ ತೆರಳಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ ಶವವಾಗಿ ಪತ್ತೆಯಾಗಿದ್ದ ಜಾಗದಲ್ಲಿ ಡೆತ್ನೋಟ್
ಪತ್ತೆಯಾಗಿದೆ. ಅದರಲ್ಲಿ ಹಣಕಾಸಿನ ಕಾರಣಕ್ಕೆ ಮನನೊಂದು ನೇಣು ಬಿಗಿದುಕೊಂಡಿರುವುದಾಗಿ ಉಲ್ಲೇಖಿಸಿದ್ದಾನೆ.
ಸಿದ್ದಾಪುರ ತಾಲೂಕಿನ ಅಣ್ಣಪ್ಪ ಎಂಬ ವ್ಯಕ್ತಿ ಹಣ ಕೊಡುವಂತೆ
ದುಂಬಾಲು ಬಿದ್ದಿದ್ದು ಆತನ ಕಿರುಕುಳುಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ನೋಟ್ ಪತ್ತೆಯಾಗಿರುವುದು ಈ ಎಲ್ಲಾ ಘಟನಾವಳಿಗೆ ಹಣಕಾಸಿನ
ಒತ್ತಡವೇ ಕಾರಣ ಎಂಬುದು ತಿಳಿದು ಬಂದಿದೆ.
ಎಷ್ಟು ಹಣ, ಅಣ್ಣಪ್ಪನೇ ಹಣಕೊಟ್ಟಿದ್ದಾ ಅಥವಾ ಆತ್ಮಹತ್ಯೆ
ಮಾಡಿಕೊಂಡ ಯುವಕನಿಗೆ ಈ ಅಣ್ಣಪ್ಪ ಎಷ್ಟು ಹಣ ಕೊಟ್ಟಿದ್ದ
ಎಂಬುದರ ಬಗ್ಗೆ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನ ಹೆಸರು ಅಕ್ಷಯ್ (22) ಎಂದು ತಿಳಿದು ಬಂದಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.