ಪ್ರೇಕ್ಷಕರ ಮನಸೂರೆಗೊಂಡ ಬಳೆ ಕೋಲಾಟ ಪ್ರದರ್ಶನ

Written by Mahesh Hindlemane

Published on:

RIPPONPETE ; ಸಿನಿಮಾ ಇನ್ನಿತರ ಡಿಜಿಟಲ್ ಮಾಧ್ಯಮದ ಭರಾಟೆಯಿಂದಾಗಿ ನಮ್ಮ ಗ್ರಾಮೀಣ ಜಾನಪದ ಮೂಲೆಗುಂಪಾಗುವ ಹಂತ ತಲುಪುವಂತಾದರೂ ಕೂಡಾ ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಯುವಕರು ತಮ್ಮ ಗ್ರಾಮದಲ್ಲಿ ಸಂಘಟಿತರಾಗಿ ಅಳಿವಿನಂಚಿನಲ್ಲಿರುವ ಗ್ರಾಮೀಣ ಸೊಗಡಿನ ಬಳೆ ಕೋಲಾಟವನ್ನು ಜೀವಂತವಾಗಿ ಉಳಿಸಿಕೊಂಡು ಬಂದಿರುವುದರ ಬಗ್ಗೆ ಪ್ರೇಕ್ಷಕರ ಮನಸೂರೆಗೊಳಿಸಿದ ಕೋಲಾಟ ಪ್ರದರ್ಶನವೇ ಸಾಕ್ಷಿಕರಿಸುವಂತಾಯಿತು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ ಸೇನಾ ಸಮಿತಿಯ 57ನೇ ವರ್ಷದ ಗಣೇಶೋತ್ಸವ ವೇದಿಕೆಯಲ್ಲಿ ಆಯೋಜಿಸಲಾದ ಹೆಸರಾಂತ ಜಾನಪದ ಆಯ್ದ ಆಹ್ವಾನಿತ ತಂಡಗಳ ಬಳೆಕೋಲಾಟ ಪ್ರದರ್ಶನ ಪ್ರೇಕ್ಷಕರನ್ನು ಜಾನಪದ ಲೋಕದಲ್ಲಿ ಮಂತ್ರಮಗ್ನರನ್ನಾಗಿ ಮಾಡಿತು.

ಸೆ.12 ರಂದು ರಾತ್ರಿ ಗಣಪತಿ ಮಂಟಪದಲ್ಲಿ ಮನೋರಂಜನಾ ಕಾರ್ಯಕ್ರಮದಲ್ಲಿ “ಬಳೆಕೋಲಾಟ’’ ಸ್ಪರ್ಧೆಯಲ್ಲಿ ತಮ್ಮ ಕಲಾ ಪ್ರದರ್ಶನವನ್ನು ನೀಡಿದರು.

ಇದೇ ಸಂದರ್ಭದಲ್ಲಿ ಕಳೆದ 50 ವರ್ಷಗಳಿಂದ ಧ್ವನಿವರ್ಧಕವನ್ನು ಅಳವಡಿಸುತ್ತಾ ದೇವರ ಸೇವೆಯನ್ನು ನಿರ್ವಿಘ್ನವಾಗಿ ನಿರ್ವಹಿಸಿಕೊಂಡು ಬರುತ್ತಿರುವ ಎಸ್.ದಾನಪ್ಪ ಮತ್ತು ಪುರೋಹಿತ ಸೇವೆಯನ್ನು ಮಾಡುತ್ತಾ ಬರುತ್ತಿರುವ ಆರ್ಚಕ ವೇ.ವಿ.ರಘುನಾತ ಭಟ್ (ರವಿಭಟ್) ಇವರನ್ನು ಸೇವಾ ಸಮಿತಿಯವರು ಸನ್ಮಾನಿಸಿ ಸತ್ಕರಿಸಿದರು.

ಗಣೇಶೋತ್ಸವ ಸೇವ ಸಮಿತಿಯ ಅಧ್ಯಕ್ಷ ರಾಮಚಂದ್ರ ಬಳೆಗಾರ್, ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಸುಧೀಂದ್ರ ಪೂಜಾರಿ, ಮುರುಳಿಧರ್‌ ಕೆರೆಹಳ್ಳಿ, ರವೀಂದ್ರ ಕೆರೆಹಳ್ಳಿ, ಹೆಚ್.ಎನ್.ಉಮೇಶ್, ವೈ.ಜೆ.ಕೃಷ್ಣ, ಈಶ್ವರ ಮಳಕೊಪ್ಪ, ನಾಗರಾಜ ಪವಾರ್, ರಾಘವೇಂದ್ರ ಚಿಪ್ಪಳಿ, ರಾಘವೇಂದ್ರ, ಪಿ.ಸುಧೀರ್, ಡಿ.ಈ. ರವಿಭೂಷಣ, ಆರ್.ರಾಘವೇಂದ್ರ, ಲಕ್ಷ್ಮಣ ಬಳ್ಳಾರಿ, ನಾಗರಾಜ ಕೆದಲುಗುಡ್ಡೆ, ಹೆಚ್.ಎನ್.ಚೋಳರಾಜ್, ಯೋಗೀಶ, ತೀರ್ಥೇಶ ಅಡಿಕಟ್ಟು, ಲಿಂಗಪ್ಪ, ಶ್ರೀನಿವಾಸ ಅಚಾರ್, ಬೇಕರಿ ನಾರಾಯಣ, ಲಕ್ಷ್ಮಣ ಆಟೋ, ಭೀಮರಾಜ್, ನವೀನ್, ಭಾಸ್ಕರ್, ಅಶೋಕ ಇನ್ನಿತರರು ಹಾಜರಿದ್ದರು.

Author Profile

Mahesh Hindlemane
Mahesh Hindlemane
ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.

Leave a Comment