ಬಸ್ನಲ್ಲಿ ನಿದ್ದೆಗೆ ಜಾರಿದ ಅಜ್ಜ, ಕಾಣೆಯಾದ ಮಗು !
ತರೀಕೆರೆ : ಅಜ್ಜನ ನಿರ್ಲಕ್ಷ್ಯದಿಂದಾಗಿ ಬಸ್ನಲ್ಲಿ (Bus) ಪ್ರಯಾಣಿಸುತ್ತಿದ್ದ 3 ವರ್ಷದ ಮಗು ತಪ್ಪಿಸಿಕೊಂಡು ಹೋದ ಘಟನೆ ಬುಧವಾರ ತರೀಕೆರೆ (Tharikere) ತಾಲೂಕಿನಲ್ಲಿ ನಡೆದಿದೆ. ಪೊಲೀಸರು ಹಾಗೂ ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಮಗು ಹೆತ್ತವರು ಮಡಿಲು ಸೇರಿದೆ.
ಬುಧವಾರ ಬೆಳಗ್ಗೆ 3 ವರ್ಷದ ಶ್ರೇಯಸ್ ತನ್ನ ಅಜ್ಜನೊಂದಿಗೆ ತರೀಕೆರೆ ಬಸ್ ನಿಲ್ದಾಣದಲ್ಲಿ ತಾಲೂಕಿನ ತಣಿಗೆಬೈಲು ಗ್ರಾಮಕ್ಕೆ ತೆರಳಲು ಬಸ್ ಹತ್ತಿದೆ. ಈ ವೇಳೆ ಅಜ್ಜ ನಿದ್ರೆಗೆ ಜಾರಿದ್ದು, ಬಸ್ನಿಂದ ಇಳಿದ ಮಗು ಬೇರೊಂದು ಬಸ್ ಅನ್ನು ಹತ್ತಿದೆ. ಬಸ್ನಲ್ಲಿ ಅಜ್ಜನನ್ನು ಕಾಣದೇ ಮಗು ಅಳಲಾರಂಭಿಸಿದ್ದು, ಈ ವೇಳೆ ಅದೇ ಬಸ್ನಲ್ಲಿದ್ದ ಇಮ್ರಾನ್ ಮತ್ತಿತರರು ಮಗುವನ್ನು ನಗರದ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಪೊಲೀಸರು ಹಾಗೂ ಸಾರ್ವಜನಿಕರು ಮಗುವಿನ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿ ಪೋಷಕರ ಪತ್ತೆಗೆ ಮನವಿ ಮಾಡಿದ್ದಾರೆ. ವಿಷಯ ತಿಳಿದು ಹೆತ್ತವರು ಠಾಣೆಗೆ ಆಗಮಿಸಿ ಮಗುವನ್ನು ಕರೆದೊಯ್ದರು.