ಶ್ರೀ ರಂಭಾಪುರಿ ಶ್ರೀಗಳ ಫೆಬ್ರವರಿ ತಿಂಗಳ ಪ್ರವಾಸ ಕಾರ್ಯಕ್ರಮ

0 285

ಎನ್.ಆರ್.ಪುರ (ಬಾಳೆಹೊನ್ನೂರು) : ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ ಫೆಬ್ರವರಿ ತಿಂಗಳ ಪ್ರವಾಸ ಕಾರ್ಯಕ್ರಮ ಈ ಕೆಳಗಿನಂತಿರುವುದಾಗಿ ಶ್ರೀ ಜಗದ್ಗುರು ರಂಭಾಪುರಿ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ ತಿಳಿಸಿದ್ದಾರೆ.

ಫೆ. 1 ರಂದು ಸೊರಬ ತಾಲೂಕು ಬಂಕಸಾಣ ಗ್ರಾಮದಲ್ಲಿ ಮಹಾರುದ್ರಯಾಗದ ಸಮಾರೋಪ ಸಮಾರಂಭ, 3 ರಂದು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಮನಗೂಳಿ ಹಿರೇಮಠದಲ್ಲಿ ಜರುಗುವ ಧರ್ಮ ಜಾಗೃತಿ ಸಮಾರಂಭ, 4 ಮತ್ತು 5 ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕು ಬಂಕಾಪುರದ ನೂತನ ಕಲ್ಯಾಣ ಮಂಟಪದಲ್ಲಿ ಮಹಾಪೂಜಾ ಹಾಗೂ ಲಿಂ.ರುದ್ರಮುನಿ ಶ್ರೀಗಳವರ ಪುಣ್ಯಾರಾಧನಾ ಸುವರ್ಣ ಮಹೋತ್ಸವ, 6 ರಂದು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಬೆಳಗಾಲಪೇಟೆಯಲ್ಲಿ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸುವರು.

ಫೆ. 7 ರಂದು ಹರಿಹರ ತಾಲೂಕಿನ ಗುತ್ತೂರು ಗ್ರಾಮದಲ್ಲಿ ಇಷ್ಟಲಿಂಗ ಪೂಜಾ, 9 ರಿಂದ 11ರ ವರೆಗೆ ಬೆಂಗಳೂರಿನಲ್ಲಿ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭ ನಡೆಸುವರು. 12 ಮತ್ತು 13 ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕಡೇನಂದಿಹಳ್ಳಿಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರ ಪೀಠಾರೋಹಣದ 33ನೇ ವರ್ಧಂತಿ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರ ಉದ್ಘಾಟನಾ ಸಮಾರಂಭ, 14 ರಂದು ಸೊರಬ ತಾಲೂಕಿನ ಚಿಕ್ಕಕಬ್ಬೂರದಲ್ಲಿ ಧರ್ಮ ಜಾಗೃತಿ ಸಮಾರಂಭ, 15 ಮತ್ತು 16 ರಂದು ಮಹಾರಾಷ್ಟ್ರದ ತುಳಜಾಪುರದಲ್ಲಿ ಲಿಂ. ಶ್ರೀ ಕೇದಾರ ಸಿದ್ದೇಶ್ವರಲಿಂಗ ಜಗದ್ಗುರುಗಳವರ ಪುತ್ಥಳಿ ಆನಾವರಣ ಸಮಾರಂಭದಲ್ಲಿ ಪಾಲ್ಗೊಳ್ಳುವರು.

ಫೆ. 17 ರಂದು ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಉದಗಟ್ಟಿಯಲ್ಲಿ ಜನ ಜಾಗೃತಿ ಧರ್ಮ ಸಮಾರಂಭ, 18 ಮತ್ತು 19 ರಂದು ಬೀಳಗಿ ತಾಲೂಕಿನ ಕುಂದರಗಿಯಲ್ಲಿ ಪುರ ಪ್ರವೇಶ ಮತ್ತು ಚರಂತಿಮಠದ ಪಟ್ಟಾಧಿಕಾರ ಸಮಾರಂಭ, 20 ಮತ್ತು 21 ರಂದು ಕುಂದಗೋಳ ತಾಲೂಕಿನ ಎರೇಬೂದಿಹಾಳದಲ್ಲಿ ಧರ್ಮ ಜಾಗೃತಿ ಸಮಾರಂಭ ಹಾಗೂ ಕಳಸಾರೋಹಣ ಸಮಾರಂಭ, 22 ರಂದು ಬಳ್ಳಾರಿ ಜಿಲ್ಲೆಯ ಸೊಂಡೂರು ತಾಲೂಕಿನ ಚೋರನೂರು ಗ್ರಾಮದ ಶ್ರೀ ವೀರಭದ್ರೇಶ್ವರ ಮೂರ್ತಿ ಪ್ರತಿಷ್ಠಾಪನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸುವರು.

ಫೆ. 24 ರಂದು ಬಾಳೆಹೊನ್ನೂರಿನ ಶ್ರೀ ಪೀಠದಲ್ಲಿ ಪೌರ್ಣಿಮೆಯಂದು ಭಕ್ತಾದಿಗಳಿಗೆ ಆಶೀರ್ವದಿಸುವರು. 26 ಮತ್ತು 27 ರಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕೂಡ್ಲಗೆರೆಯಲ್ಲಿ ಪುರ ಪ್ರವೇಶ-ಧರ್ಮ ಸಮಾರಂಭ, 28 ರಂದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚಂದನಹಳ್ಳಿ ಗ್ರಾಮದಲ್ಲಿ ನೂತನ ದೇವಸ್ಥಾನದ ಉದ್ಘಾಟನಾ ಸಮಾರಂಭ ಹಾಗೂ 29 ರಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಗೋಪುರ ಕಳಸಾರೋಹಣ ಸಮಾರಂಭದ ಸಾನಿಧ್ಯ ವಹಿಸುವರೆಂದು ಅವರು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!