ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಾ ಬಂದಿದೆ ; ಶೋಭಾ ಕರಂದ್ಲಾಜೆ
ಚಿಕ್ಕಮಗಳೂರು: ಕಾಂಗ್ರೆಸ್ (Congress) ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಅಲ್ಪಸಂಖ್ಯಾತರನ್ನು ಓಲೈಸುವ, ಎತ್ತಿಕಟ್ಟುವ ಕೆಲಸವನ್ನು ನಿರಂತರವಾಗಿ ಮಾಡ್ತಾ ಬಂದ್ರಿ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರು ಹೇಳಿದರು.
ಭಾನುವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಆಡಳಿತದಲ್ಲಿ 2013ರಲ್ಲಿ ಇಲ್ಲದ ಟಿಪ್ಪು ಜಯಂತಿ ತಂದು ಹಿಂದೂ ಮತ್ತು ಮುಸ್ಲಿಂ ಹೊಡೆದಾಡುವ ರೀತಿಯಲ್ಲಿ ಮಾಡಿದ್ರಿ, ಕುಟ್ಟಪ್ಪ ಅವರ ಸಾವು ಕೂಡ ಆಯ್ತು, ಇಂದು ಶಾಂತವಾಗಿರುವ ಹಿಜಾಬ್ವನ್ನು ಮತ್ತೆ ಮುನ್ನಲೆಗೆ ತರುವ ಕೆಲಸ ಮಾಡಿದಿರಿ ಎಂದರು.
ಶಾಲಾ-ಕಾಲೇಜುಗಳಲ್ಲಿ ಯೂನಿಫಾರಂ ಇದೆ, ಅದೇ ಯೂನಿಫಾರಂ ಅನ್ನು ಕಿತ್ತು ಹಾಕುತ್ತಿದ್ದೀರಾ, ಹಿಜಾಬ್ ಹಾಕಿಕೊಂಡು ಬನ್ನಿ ಎನ್ನುತ್ತಿದ್ದೀರಾ ಎಂದ ಅವರು, ಈ ವಿಷಯದಲ್ಲಿ ಸ್ಪಷ್ಟನೆ ನೀಡಬೇಕು, ಶಾಲೆಯ ಯೂನಿಫಾರಂ ಅಗತ್ಯವಿಲ್ಲ, ಹಿಜಾಬ್ ಹಾಕಿಕೊಂಡು ಬರಬೇಕೆಂದು. ಈ ವಿಚಾರವನ್ನು ದೇಶಕ್ಕೆ ರಾಜ್ಯಕ್ಕೆ ಸಂದೇಶ ನೀಡಲು ಹೊರಟಿದ್ದೀರಿ ಎಂದು ಹೇಳಿದರು.
ಲೋಕಸಭೆ ಚುನಾವಣೆ ಹತ್ತಿರಕ್ಕೆ ಬಂದಿದೆ. ಅಲ್ಪಸಂಖ್ಯಾತರ ವೋಟ್ ಬ್ಯಾಂಕ್ಗಾಗಿ ಹಿಜಾಬ್ವನ್ನು ಮುನ್ನಲೆಗೆ ತರುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಕಳೆದ ಬಾರಿ ನಿಮ್ಮ ಮುಖವಾಡ ನೋಡಿದ್ದೇವೆ. ಅದು 2018ರಲ್ಲಿ ಕಳಚಿ ಬಿದ್ದಿದೆ, ಯಾವುದೇ ಅಭಿವೃದ್ಧಿಯಾಗಿಲ್ಲ, ನಿಮ್ಮ ವಿರುದ್ಧ ನಿಮ್ಮ ಶಾಸಕರು, ಸಚಿವರು ಬಂಡೆದಿದ್ದಾರೆ. ಅದನ್ನು ಮುಚ್ಚಿ ಹಾಕಲು ಮತ್ತೆ ಹಿಂದೂ ಮತ್ತು ಮುಸ್ಲಿಂಮರನ್ನು ಒಡೆದಾಳುವ ನೀತಿ ಮಾಡಿತ್ತಿದ್ದೀರಾ, ಇದನ್ನು ಬಿಡಿ, ಅಭಿವೃದ್ಧಿ ಕೆಲಸ ಮಾಡಿ, ಕ್ಷೇತ್ರಗಳಿಗೆ ದುಡ್ಡುಕೊಡಿ ಎಂದು ಹೇಳಿದರು.
ಯಾರು ಬೂಟ್ ನೆಕ್ಕುವವರು, ಯಾರು ಬ್ರಿಟಿಷರ ಪರ ಇದ್ರು, ಯಾರು ಮೌಂಟ್ ಬ್ಯಾಂಟನ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಎಂಬುದು ದೇಶದ ಚರಿತ್ರೆಯಲ್ಲಿದೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚರಿತ್ರೆಯನ್ನು ಮತ್ತೆ ಕೆದಕಬೇಡಿ ಹರಿಪ್ರಸಾದ್ರವರೇ ಕೆದಕಲು ಬಂದ್ರೆ, ಮತ್ತೆ ನಿಮ್ಮ ಮುಖಕ್ಕೆ ಮಸಿಯಾಗುತ್ತದೆ. ಜನ ಅಭಿವೃದ್ಧಿ, ಶಾಂತಿ ಕೇಳುತ್ತಿದ್ದಾರೆ. ಒಟ್ಟಾಗಿ ಹೋಗಲು ಹೇಳುತ್ತಿದ್ದಾರೆ. ಬೂಟ್ ನೆಕ್ಕುವವರು ನೀವು, ಇದರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಕಾಂಗ್ರೆಸ್ಗೆ ಇಲ್ಲ, ಕುಟುಂಬ ರಾಜಕಾರಣ ಭ್ರಷ್ಟಚಾರ, ಸ್ವಜನಪಕ್ಷಪಾತ ಕಾಂಗ್ರೆಸ್ ಪಕ್ಷದಲ್ಲಿದೆ ಎಂದ ಅವರು, ಇವರು ಬ್ರಿಟಿಷರನ್ನ ಯಾವಾಗ ಕಂಡಿದ್ರು, ನಮ್ಮ ಹೋರಾಟ, ನಮ್ಮ ಚರಿತ್ರೆ ಯಾವಾಗ ಓದಿದ್ದಾರೆ ಎಂದು ಕಿಡಿಕಾರಿದರು.