ಸಾಗರ: ಈ ಪ್ರದೇಶಗಳಲ್ಲಿ ಜೂ. 27 ರಂದು ಇಡೀ ದಿನ ಕರೆಂಟ್ ಇರಲ್ಲ !

Written by Koushik G K

Updated on:

ಸಾಗರ ಉಪವಿಭಾಗ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ದಿನಾಂಕ 27-06-2025 ಶುಕ್ರವಾರ, ತುರ್ತು ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಬೆಳಿಗ್ಗೆ 10:00 ರಿಂದ ಸಂಜೆ 6:00 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

WhatsApp Group Join Now
Telegram Group Join Now
Instagram Group Join Now

110/33/11 ಕೆ.ವಿ. ಸಾಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಾಹಣಾ ಕಾಮಗಾರಿ ಇರುವುದರಿಂದ ಸಾಗರ ಟೌನ್, ಪಟ್ಟಣದ ವಿವಿಧ ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಸಾಗರ ಪಟ್ಟಣ ವ್ಯಾಪ್ತಿಯ ಎಫ್ -೧ ಸಾಗರ ಟೌನ್ ,ಎಫ್ -೭ ಮಂಗಳಬೀಸು ಇಂಡಸ್ಟ್ರಿಯಲ್ ಏರಿಯಾ ,ಎಫ್ -೮ ಮಾರಿಕಾಂಬ ,ಎಫ್ -೧ ೫ ಆರ್ ಎಂ ಸಿ ,ಎಫ್ -೧ ೧ ಎಸ್ .ಏನ್ .ನಗರ ಮತ್ತು ಗ್ರಾಮೀಣ ವ್ಯಾಪ್ತಿಯ ಎಫ್ -೨ ಮಾಲ್ವೆ ,ಎಫ್ -೩ ಹೆಗ್ಗೋಡು ,ಎಫ್ -೪ ಆವಿನಹಳ್ಳಿ ,ಎಫ್ – ೫ ವರದಹಳ್ಳಿ ,ಎಫ್ -೬ ಬೊಮ್ಮತ್ತಿ , ಎಫ್ – ೯ ಮಾಸೂರು ,ಎಫ್ – ೧ ೪ ಹಿರೇನೆಲ್ಲೂರು ಹಾಗು ಎಫ್ – ೧ ೬ ಲಿಂಗದಹಳ್ಳಿ ಮಾರ್ಗದಿಂದ ವಿದ್ಯುತ್ ಸಂಪರ್ಕ ಪಡೆದಿರುವ ಸಾಗರ ಪಟ್ಟಣ ,ಆವಿನಹಳ್ಳಿ ,ಹೆಗ್ಗೋಡು , ಭೀಮನಕೋಣೆ ,ಯಡಜಿಗಳಮನೆ ,ಕಲ್ಮನೆ ,ಭೀಮನೇರಿ ,ಕೆಳದಿ ,ಮಾಸೂರು , ಹಿರೇನೆಲ್ಲೂರು,ಪಡವಗೋಡು ,ನಾಡಕಲಸಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ .

Read More :ರೈತ ಬಾಂಧವರೇ ಗಮನಿಸಿ : ಹವಾಮಾನಾಧರಿತ ಬೆಳೆ ವಿಮೆಗೆ ನೊಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ

Leave a Comment