ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ; ತಂದೆ, ಮಗನ ಕಾಲು ಕಟ್ !

0 3,170

ರಿಪ್ಪನ್‌ಪೇಟೆ : ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಂದೆ ಮತ್ತು ಮಗನ ಕಾಲು ತುಂಡಾಗಿರುವ ಘಟನೆ ಗರ್ತಿಕೆರೆಯಲ್ಲಿ ಶನಿವಾರ ರಾತ್ರಿ 08 ಗಂಟೆ ಸುಮಾರಿಗೆ ನಡೆದಿದೆ.

ಗಾಯಾಳುಗಳನ್ನು ಇಲ್ಲಿನ ಅವುಕ ನಿವಾಸಿಗಳಾದ ಗಿರಿಯಪ್ಪ ಮತ್ತು ಆತನ ಪುತ್ರ ಮಂಜುನಾಥ್ ಎಂದು ಗುರುತಿಸಲಾಗಿದೆ.

ಹುಂಚದಕಟ್ಟೆ ಕಡೆಯಿಂದ ಗರ್ತಿಕೆರೆ ಕಡೆಗೆ ಬರುತ್ತಿದ್ದ ಬೈಕ್‌ಗೆ ಸಾಗರ್ ಬಾಳೆಕಾಯಿ ಮಂಡಿ ಬಳಿ ಎದುರಿನಿಂದ ಬಂದ ಟ್ರ್ಯಾಕ್ಟರ್ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಬೈಕ್ ಸವಾರರ ಇಬ್ಬರ ಒಂದೊಂದು ಕಾಲುಗಳು ಸಂಪೂರ್ಣ ತುಂಡಾಗಿದ್ದು ಗಾಯಾಳುಗಳನ್ನು ಆ್ಯಂಬುಲೆನ್ಸ್ ಮೂಲಕ ಉಡುಪಿಯ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave A Reply

Your email address will not be published.

error: Content is protected !!