ಪುನೀತ್ ರಾಜ್ಕುಮಾರ್ ಅಭಿಮಾನಿಯಿಂದ ಸೈಕಲ್ ಜಾಥದೊಂದಿಗೆ ಪರಿಸರ ರಕ್ಷಣೆಯ ಜನಜಾಗೃತಿ ಯಾತ್ರೆ
ರಿಪ್ಪನ್ಪೇಟೆ: ತಮಿಳುನಾಡಿನ ಕೊಯುಮತ್ತೂರಿನ ಯುವಕನೋರ್ವ ಡಾ.ಪುನೀತ್ ರಾಜ್ಕುಮಾರ್ ಅಭಿಮಾನಿಯಾಗಿದ್ದು ಆತನ ಪರಿಸರ ಪ್ರಜ್ಞೆಯೊಂದಿಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಸಂಕಲ್ಪದೊಂದಿಗೆ ಸೈಕಲ್ ಮೂಲಕ ದೇಶ ಪರ್ಯಟನೆಯಲ್ಲಿ ತೊಡಗಿಸಿಕೊಂಡಿರುವ ತಮಿಳುನಾಡಿನ ಮುತ್ತು ಸೆಲ್ವಂ ರಿಪ್ಪನ್ಪೇಟೆಗೆ ಆಗಮಿಸುತ್ತಿದ್ದಂತೆ ಇಲ್ಲಿನ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ ಮತ್ತು ಕನ್ನಡ ಪ್ರಕಾಶ ಪಾಲೇಕರ್ ಕಸ್ತೂರಿ ಸಂಘದವರು ಸ್ವಾಗತಿಸಿ ಬರಮಾಡಿಕೊಂಡರು.
ಸೈಕಲ್ನಲ್ಲಿ ದೇಶ ಪರ್ಯಟನೆಯಲ್ಲಿ ತೊಡಗಿರುವ ತಮಿಳುನಾಡಿನ ಕೊಯಮತ್ತೂರು ಮುತ್ತು ಸೆಲ್ವಮ್ರಿಗೆ ಸಾರ್ವಜನಿಕರಿಂದ ಅಭಿನಂದನೆಗಳ ಸುರಿಮಳೆಯ ಹರಿದು ದೇಣಿಗೆ ಸಂಗ್ರಹಿಸಿ ಪರ್ಯಟನೆಯಲ್ಲಿರುವ ವ್ಯಕ್ತಿಗೆ ನೆರವು ನೀಡಿ ಬೀಳ್ಕೊಟ್ಟರು.