ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು ಮತ್ತು ಗೌರವಿಸಬೇಕು

0 195

ರಿಪ್ಪನ್‌ಪೇಟೆ: ಮುನುಷ್ಯ ಮನುಷ್ಯನನ್ನು ಪ್ರೀತಿಸಬೇಕು ಮತ್ತು ಗೌರವಿಸಬೇಕು ಪ್ರೀತಿ ಮತ್ತು ಕ್ಷಮೆಯಿಂದ ಜಗತ್ತನೇ ಗೆಲ್ಲಬೇಕು ಎಂದು ತೋರಿಸಿಕೊಟ್ಟ ಪ್ರಭು ಏಸು ಸ್ವಾಮಿಯವರ ಶುಭ ಸಂದೇಶ ಇಂದಿಗೂ ಪ್ರಸ್ತುತ ಎಂದು ಕಬಳೆಯ ಸೈಂಟ್ ಪ್ರಾನ್ಸಿಸ್ ಚರ್ಚ್ ಧರ್ಮಗುರು ರೋಮನ್‌ಪಿಂಟೋ ಹೇಳಿದರು.

ಪಟ್ಟಣದ ಗುಡ್‌ಶಫರ್ಡ್ ಚರ್ಚ್‌ನ ವಾರ್ಷಿಕ ಹಬ್ಬದ ಅಂಗವಾಗಿ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಆಯೋಜಿಸಲಾದ ಧಾರ್ಮಿಕ ಕಾರ್ಯಕ್ರಮದಲ್ಲಿ ಶುಭ ಸಂದೇಶವನ್ನು ನೀಡಿದ ಅವರು, ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ಪ್ರತಿಯೊಬ್ಬರು ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಯಾರಿಗೂ ನೆಮ್ಮದಿಯ ಜೀವನ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಮಾಜದಲ್ಲಿನ ಪ್ರತಿಯೊಬ್ಬರು ಪ್ರೀತಿಯನ್ನು ಹಂಚಿಕೊಂಡು ಕ್ಷಮೆಯಾಚನೆ ನೀಡುವುದರ ಮೂಲಕ ಜಾತಿ, ಮತ, ಪಂಥಗಳ ಭೇದವನ್ನು ಮರೆತು ಸದ್ಬಾವನೆಯಿಂದ ಎಲ್ಲದರಲ್ಲೂ ಬೆರೆತು ಸಹಕಾರ ಮನೋಭಾವನೆಯಿಂದ ಬಾಳ್ವೆಯನ್ನು ಮಾಡಿದರೆ ಪ್ರತಿಯೊಬ್ಬರು ನೆಮ್ಮದಿಯ ಬದುಕಯನ್ನು ಕಾಣಬಹುದ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆನವಟ್ಟಿ ಕೈಸ್ತರಾಜ ಚರ್ಚ್‌ನ ಧರ್ಮಗುರು  ಮ್ಯಾಥ್ಯೂಸ್ ಶಿವಮೊಗ್ಗ ಸೋಶಿಯಲ್ ವೆಲ್ಪೇರ್ ಸೊಸೈಟಿ ಡೈರೆಕ್ಟರ್ ರೆ.ಪಾ.ಆಬ್ರಹಾಂ ಹಾಗೂ ರಿಪ್ಪನ್‌ಪೇಟೆ ಗುಡ್‌ಶಫರ್ಡ್ ಚರ್ಚ್‌ನ ಧರ್ಮ ಗುರು ಬಿನೋಯ್ ಮ್ಯಾಥ್ಯೂಸ್ ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!