ಮಲೆನಾಡಿನಾದ್ಯಂತ ಕ್ಷೀಣಿಸಿದ ಮಳೆ ; ಗರಿಗೆದರಿದ ಕೃಷಿ ಚಟುವಟಿಕೆ
ಹೊಸನಗರ : ತಾಲೂಕಿನ ಎಲ್ಲೆಡೆ ಬಿರುಸಿನಿಂದ ಸುರಿದ ಪುಷ್ಯ ಮಳೆ ಕಳೆದ ಮೂರ್ನಾಲ್ಕು ದಿನಗಳಿಂದ ಕ್ಷೀಣಿಸಿದ್ದು ಬಿಸಿಲು ತುಂತುರು ಮಳೆ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ಅನ್ನದಾತ ಭೂಮಾತೆಗೆ ನಮಸ್ಕರಿಸಿ ಗದ್ದೆಗಿಳಿದು ನಾಟಿ ಕಾರ್ಯದಲ್ಲಿ ತೊಡಗಿರುವುದು ತಾಲೂಕಿನ ಎಲ್ಲೆಡೆ ಗೋಚರಿಸುತ್ತಿದೆ.
ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ತಾಲೂಕಿನ ಮಾಣಿಯಲ್ಲಿ 84 ಮಿಲಿಮೀಟರ್, ಯಡೂರಿನಲ್ಲಿ 83 ಮಿಲಿ ಮೀಟರ್ ಸಾವೇಹಕ್ಲುವಿನಲ್ಲಿ 64 ಮಿ.ಮೀ., ಹುಲಿಕಲ್ 57 ಮಿಲಿ ಮೀಟರ್ ಮಾಸ್ತಿಕಟ್ಟೆ ಹಾಗೂ ಚಕ್ರಾನಗರದಲ್ಲಿ 42 ಮಿ.ಮೀ, ಕಾರ್ಗಲ್ (ಸಾಗರ) 20 ಮಿಲಿ ಮೀಟರ್ ಮಳೆ ದಾಖಲಾಗಿದೆ.
ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://fb.watch/m8vzD3HVMD/?mibextid=MGVWDh
ಲಿಂಗನಮಕ್ಕಿ ಜಲಾಶಯದ ಮಟ್ಟ 1787.85 ಅಡಿಗೆ ತಲುಪಿದ್ದು ಜಲಾಶಯಕ್ಕೆ 13660 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 1819 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 1798.60 ಅಡಿ ತಲುಪಿತ್ತು.