ಹೊಸನಗರದಲ್ಲೊಂದು ಕಾರ್ಪೊರೇಟ್ ರೌಡಿಸಂ ! ಕೊಡಚಾದ್ರಿ ಚಿಟ್ಸ್ ಫಂಡ್ ನೌಕರರಿಂದ ವ್ಯಕ್ತಿ ಮೇಲೆ ಹಲ್ಲೆ

0 2,560

ಹೊಸನಗರ: ಪಟ್ಟಣದಲ್ಲಿ ಪ್ರತಿಷ್ಠಿತ ಕೊಡಚಾದ್ರಿ ಚಿಟ್ಸ್ ಫಂಡ್ ಕಂಪನಿಯ ನೌಕರರು ಚೀಟಿ ಹಾಕಲ್ಲ ಎಂದ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಲು ಮುಂದಾಗಿರುವ ಘಟನೆ ನಡೆದಿದೆ.

ಹೊಸನಗರ ನ್ಯಾಯಲಯದ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು ಚೀಟಿ ಹಾಕಲ್ಲ ಎಂದವನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಏನಿದು ಘಟನೆ ?

ಹೊಸನಗರದ ಪ್ರತಿಷ್ಠಿತ ಕೊಡಚಾದ್ರಿ ಚಿಟ್ಸ್ ಫಂಡ್ ಕಂಪನಿಯ ಏಜೆಂಟ್ ಒಬ್ಬರು ಒಬ್ಬ ವ್ಯಕ್ತಿಯ ಬಳಿ ಚೀಟಿ ಹಾಕುವಂತೆ ಪ್ರಮೋಷನ್ ನೀಡಲು ಹೋಗಿದ್ದಾರೆ ಈ ಸಂದರ್ಭದಲ್ಲಿ ಆನ್‌ಲೈನ್ ಲೋನ್ ಆಪ್ ಮೂಲಕ ಸಾಕಷ್ಟು ಹಣ ಕಳೆದುಕೊಂಡಿದ್ದ ವ್ಯಕ್ತಿ ಇದೆಲ್ಲಾ ಮೋಸ ಹಾಗೇ ಹೀಗೆ ಎಂದು ಮಾತನಾಡಿ ನೌಕರನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಈ ಬಗ್ಗೆ ಚಿಟ್ಸ್ ಫಂಡ್ ಕಂಪನಿಯ ಎಲ್ಲಾ ನೌಕರರಿಗೆ ಮಾಹಿತಿ ತಿಳಿದು ನ್ಯಾಯಾಲಯದ ಮುಂಭಾಗದಲ್ಲಿ ಆ ವ್ಯಕ್ತಿಯ ಮೇಲೆ ಏಕಾಏಕಿ ಹಲ್ಲೆಗೆ ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ಅಲ್ಲಿದ್ದ ಹಿರಿಯ ಪತ್ರಕರ್ತರೊಬ್ಬರು ಘಟನೆಯ ವಿಡಿಯೋ ಚಿತ್ರೀಕರಿಸಲು ಮುಂದಾದಾಗ ಅವರ ಮೊಬೈಲ್ ಕಸಿದುಕೊಂಡು ಯಾಕೆ ವೀಹಡಿಯೋ ಮಾಡ್ತೀಯಾ ? ಎಂದು ಧಮ್ಕಿ ಹಾಕಿದ್ದಾರೆ.

ಸದ್ಯ ಈಗ ಪ್ರಕರಣ ಹೊಸನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಚಿಟ್ಸ್ ಫಂಡ್ ನೌಕರನ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿ ಹಾಗೂ ಕಾನೂನನ್ನು ಮರೆತು ಏಕಾಏಕಿ ಹಲ್ಲೆಗೆ ಮುಂದಾಗಿ ನೈತಿಕ ಪೊಲೀಸ್ ಗಿರಿ ಮೆರೆದ ಸಂಸ್ಥೆಯ ನೌಕರರ ಮೇಲೆ ಏನು ಕ್ರಮವಾಗುತ್ತೋ ಕಾದು ನೋಡಬೇಕಾಗಿದೆ.

Leave A Reply

Your email address will not be published.

error: Content is protected !!