ಜಿಲ್ಲಾ ಮಟ್ಟದಲ್ಲಿ ಪ್ರಗತಿಪರ ಕೃಷಿಕ ಪ್ರಶಸ್ತಿ ಪಡೆದ ಪೃಥ್ವಿ ಕೃಷ್ಣಮೂರ್ತಿ

0 300

ಹೊಸನಗರ: ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ನೀಡುತ್ತದೆ ಅದಕ್ಕೆ ಉದಾಹರಣೆ ನಾನೇ ಎಂದು ಪೃಥ್ವಿ ಕೃಷ್ಣಮೂರ್ತಿಯವರು ಹೇಳಿದರು.

ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ನಡೆದ ಜಿಲ್ಲಾಮಟ್ಟದ ಪ್ರಗತಿ ಪರ ಕೃಷಿಕ ಪ್ರಶಸ್ತಿಯನ್ನು ಹೊಸನಗರದ ವಾರಂಬಳ್ಳಿ ಕೃಷಮೂರ್ತಿಯವರ ಪತ್ನಿ ಪೃಥ್ವಿ ಕೃಷ್ಣಮೂರ್ತಿಯವರಿಗೆ ಲಭಿಸಿದ್ದು ಈ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ನನ್ನ ಕುಟುಂಬದವರೆಲ್ಲರ ಶ್ರಮದಿಂದ ಸಮಗ್ರ ಕೃಷಿ ಪದ್ದತಿಯಿಂದ ಹಾಗೂ ಸಾವಯುವ ಕೃಷಿ ಪದ್ದತಿಯಿಂದ ಈ ಪ್ರಶಸ್ತಿ ನನಗೆ ಲಭಿಸಿದೆ ಯಾವುದೇ ರೈತರಾಗಲಿ ತಮ್ಮ ತಾವು ಬೆಳೆದ ಬೆಳೆಗೆ ಬೆಲೆ ಸಿಕ್ಕೆ ಸಿಗುತ್ತದೆ ಅಲ್ಲಿಯವರೆಗೆ ದುಡಿಮೆಗೆ ತಕ್ಕ ಫಲ ದೇವರು ಕರುಣಿಸಿರುತ್ತಾರೆ. ಒಂದಲ್ಲ ಒಂದು ರೀತಿಯಲ್ಲಿ ಭೂಮಿ ತಾಯಿ ಯಾವುದೇ ರೈತರನ್ನು ನಡು ನೀರಿನಲ್ಲಿ ಕೈ ಬೀಡುವುದಿಲ್ಲ. ಆದರೆ, ರೈತರಲ್ಲಿ ತಾಳ್ಮೆ ಮುಖ್ಯ ಎಂದರು.

Leave A Reply

Your email address will not be published.

error: Content is protected !!