ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ನಾನು ಸ್ಪರ್ಧಾ ಆಕಾಂಕ್ಷಿ ; ಪಿ. ಷಣ್ಮುಖಪ್ಪ
ರಿಪ್ಪನ್ಪೇಟೆ: ಮುಂಬರುವ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಾನು ಸ್ಪರ್ಧಾ ಅಕಾಂಕ್ಷಿಯೆಂದು ರಿಪ್ಪನ್ಪೇಟೆಯ ಯುವ ಪದವೀಧರ ಪಿ. ಷಣ್ಮುಖಪ್ಪ ತಿಳಿಸಿದರು.
ರಿಪ್ಪನ್ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಪುಟ್ಟ ಗ್ರಾಮವೊಂದರಲ್ಲಿ ಬಡಕುಟುಂಬದಲ್ಲಿ ಹುಟ್ಟಿ ಬೆಳದಿದ್ದು ಹೋಟೆಲ್ ಉದ್ಯಮ ನಡೆಸಿಕೊಂಡಿರುವ ನಾನು, ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ನಡೆಸಿ ನಂತರ ಪದವಿ ಶಿಕ್ಷಣವನ್ನು ಶಿವಮೊಗ್ಗದ ಸಹ್ಯಾದ್ರಿ ಕಲಾಮತ್ತು ವಾಣಿಜ್ಯ ಕಾಲೇಜ್ನಲ್ಲಿ ಪೊರೈಸಿ ಹಿಂದಿ ಮಾಧ್ಯಮದಲ್ಲಿ ಹಿಂದಿ ಪದವಿಯ “ಭಾಷಾ ಪ್ರವೀಣ’’ಪದವಿ ಪಡೆದಿರುವ ನಾನು ಸ್ಥಳೀಯ ಗ್ರಾಮ ಪಂಚಾಯ್ತಿಯ ಚುನಾವಣೆಗಳಲ್ಲಿ ಸ್ಪರ್ಧಿಸಿ ಪರಾಭವಗೊಂಡಿರುವ ನನಗೆ ಈ ಬಾರಿಯಲ್ಲಿ 2024 ರಲ್ಲಿ ನಡೆಯುವ ನೈರುತ್ಯ ಪದವಿಧರ ಕ್ಷೇತ್ರದ ಪಕ್ಷೇತರ ಆಭ್ಯರ್ಥಿಯಾಗಿ ಚುನಾವಣೆ ಸ್ಪರ್ಧಿಸುವುದಾಗಿ ಚಿಂತನೆ ನಡೆಸಿರುವುದಾಗಿ ವಿವರಿಸಿದರು.